ಚಾಮರಾಜನಗರ : ತಾಲೂಕಿನ ದೊಳ್ಳಿಪುರ ಗ್ರಾಮದಲ್ಲಿ ಮಹಿಳೆಯೋರ್ವಳನ್ನು ಹತ್ಯೆ ಮಾಡಲಾಗಿದೆ. ಗ್ರಾಮದ ಮಹೇಶ್ ಎಂಬುವರ ಪತ್ನಿ ಶುಭಾ (38) ಮೃತ ಮಹಿಳೆ. ಈಕೆ ಗಂಡ, ಅತ್ತೆ ಭಾರತಿ ಅವರೊಂದಿಗೆ ತೋಟದ ಮನೆಯಲ್ಲಿ ವಾಸವಾಗಿದ್ದರು. ಸೋಮವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ನನ್ನ ಪತ್ನಿ ಶುಭಾಳನ್ನು ಯಾರೊ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪತಿ ಮಹೇಶ್ ಅವರೇ ಪೂರ್ವ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
5 ಹುಲಿಗಳ ಸರಣಿ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣ: ಸಂಸದ ಸುನೀಲ್ ಬೋಸ್
ಅಲ್ಲದೆ ಬೆಂಗಳೂರಿನಲ್ಲಿರುವ ಶುಭಾ ಅವರ ತಂಗಿ ಶೃತಿಗೂ ಸಹ ಮಹೇಶ್ ಕರೆ ಮಾಡಿ ವಿಷಯ ತಿಳಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಎಎಸ್ಪಿ ಶಶಿಧರ್, ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹಣಕಾಸಿನ ವಿಚಾರದಲ್ಲಿ ನನ್ನ ಅಕ್ಕ ಶುಭಾಳನ್ನು ಅವಳ ಪತಿ ಮಹೇಶ್ ಮತ್ತು ಅತ್ತೆ ಭಾರತಿ ಆಗಿಂದಾಗ್ಗೆ ಪೀಡಿಸುತ್ತಿದ್ದರು. ನಿಮ್ಮ ಅಪ್ಪನ ಮನೆಯಿಂದ ಹಣ ತಂದುಕೊಡು ಎಂದು ಕಿರುಕುಳ ನೀಡುತ್ತಿದ್ದರು. ಈ ವಿಚಾರದಿಂದ ನನ್ನ ಅಕ್ಕ ಶುಭಾಳಿಗೆ ಮಹೇಶ್ ಮತ್ತು ಆತನ ತಾಯಿ ಭಾರತಿ ಯಾವುದೋ ಆಯುಧದಿಂದ ಹೊಡೆದು ಕೊಂದಿದ್ದಾರೆ ಎಂದು ಶುಭಾ ಅವರ ತಂಗಿ ಶೃತಿ ಅನುಮಾನ ವ್ಯಕ್ತಪಡಿಸಿ ಮಹೇಶ್ ಹಾಗೂ ಭಾರತಿ ಅವರ ವಿರುದ್ದ ದೂರು ನೀಡಿದ್ದಾರೆ.
ಮೃತ ಶುಭಾ ಅವರ ತಂಗಿ ಶೃತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ಪೋಲಿಸ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.