ಯಾದಗಿರಿ :- ನಾರಾಯಣಪುರ ಡ್ಯಾಂ ನೀರಿಗಾಗಿ ಆಗ್ರಹಿಸಿ ಯಾದಗಿರಿ ಬಂದ್ ಗೆ ಕರವೇ ಕರೆ ಕೊಟ್ಟಿದೆ. ಅದರಂತೆ ಇಂದು ಬೆಳ್ಳಂಬೆಳಗ್ಗೆ ಕರವೇ ಕಾರ್ಯಕರ್ತರಿಂದ ಬಂದ್ ಗೆ ಬೆಂಬಲಿಸಿ ಹೋರಾಟ ಮಾಡಲಾಗಿದೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಳೆಯಿಂದ ಮಳೆ ಆರ್ಭಟ: ಯೆಲ್ಲೋ ಅಲರ್ಟ್ ಘೋಷಣೆ!
ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಹೋರಾಟ ಮಾಡಲಾಗುತ್ತಿದೆ. ಯಾದಗಿರಿ ನಗರದಲ್ಲಿ ಹೋರಾಟಗಾರರು ಅಂಗಡಿಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿದ್ದಾರ.
ಹೋರಾಟಗಾರರ ಪ್ರತಿಭಟನೆ ಹಿನ್ನೆಲೆ ವಿಧಿಇಲ್ಲದೇ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿದ್ದಾರೆ.