Close Menu
Ain Live News
    Facebook X (Twitter) Instagram YouTube
    Monday, June 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಲಂಕಾಧಿಪತಿ ರಾವಣನಾಗಲು ಹೊರಟ ರಾಕಿಭಾಯ್ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ..ಶಿವ ನಮ್ಮ ಕುಲದೇವ್ರು ಎಂದ ಯಶ್!‌

    By Author AINApril 21, 2025
    Share
    Facebook Twitter LinkedIn Pinterest Email
    Demo

    ರಾಕಿಂಗ್‌ ಸ್ಟಾರ್‌ ಯಶ್‌ ಲಂಕಾಧಿಪತಿ ರಾವಣನಾಗುವ ಮೊದಲು ಮಹತ್ತರ ಕಾರ್ಯವೊಂದನ್ನು ಮಾಡಿದ್ದಾರೆ. ನಾಳೆಯಿಂದ ರಾಮಾಯಾಣ 2 ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಹೀಗಾಗಿ ಶೂಟಿಂಗ್ ಆರಂಭಕ್ಕೂ ಮುನ್ನ ಯಶ್‌ ಉಜ್ಜನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಇದೇ ವೇಳೆ ಯಶ್,  ಶಿವನ ಆಶೀರ್ವಾದ ಪಡೆಯಲು ಬಂದೆ. ಬಹಳ ಖುಷಿ ಆಗುತ್ತಿದೆ. ನಾನು ಚಿಕ್ಕಂದಿನಿಂದ ಶಿವನ ದೊಡ್ಡ ಭಕ್ತ. ನಾವು ಮನೆದೇವರು ಎಂದು ಕರೆಯುತ್ತೇನೆ. ಕುಲದೇವರು ಶಿವ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ”  ಎಂದು ಹೇಳಿದ್ದಾರೆ.


    ರಾಕಿಭಾಯ್ ತಮ್ಮ ಬ್ಯಾನರ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಮಲ್ಹೋಟಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ರಾವಣಾಸುರನಾಗಿ ಗಹಗಹಿಸಲಿದ್ದಾರೆ. ಅದಕ್ಕೂ ಮುನ್ನ ಶಿವನಿಗೆ ನಮಿಸಿದ್ದಾರೆ. ಪ್ರತಿ ಸಿನಿಮಾ ಆರಂಭಕ್ಕೂ ಮುನ್ನ ಯಶ್‌ ಟೆಂಪಲ್‌ ರನ್‌ ಮಾಡೋದು ವಾಡಿಕೆ. ಅದರಂತೆ ಇಂದು ಉಜ್ಜನಿಯ ಮಹಾಕಾಳೇಶ್ವರ ನಮಿಸಿದ್ದಾರೆ.

    ಮಧ್ಯಪ್ರದೇಶದ ಸಿಎಂ ಭೇಟಿಯಾದ ಯಶ್!‌

    ಉಜ್ಜನಿಯ ಮಹಾಕಾಳೇಶ್ವರ ದರ್ಶನ ಪಡೆದ ಬಳಿಕ ಯಶ್‌ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಭೇಟಿ ಮಾಡಿದ್ದಾರೆ. ಇದೊಂದು ಆತ್ಮೀಯ ಭೇಟಿಯಾಗಿದ್ದು, ಯಶ್‌ ಅವರನ್ನು ಮೋಹನ್‌ ಯಾದವ್‌ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

    ರಣ್ಬೀರ್‌ ರಾಮ, ಸಾಯಿಪಲ್ಲವಿ ಸೀತೆ!

    ರಾಮಯಣ ಸಿನಿಮಾದಲ್ಲಿ ರಣ್ಬೀರ್‌ ಕಪೂರ್‌ ರಾಮನಾಗಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ರಿವೀಲ್‌ ಮಾಡಿಲ್ಲ. ನಿತಿಶ್‌ ತಿವಾರಿ ಸಾರಥ್ಯದಲ್ಲಿ ರಾಮಾಯಣ ಸಿನಿಮಾದ ಎರಡು ಭಾಗಗಳಾಗಿ ತೆರೆ ಬರ್ತಿದ್ದು, ಈ ಚಿತ್ರದ ಮುಂದಿನ ವರ್ಷ ರಾಮಾಯಣ 1 ಸಿನಿಮಾದ ದರ್ಶನವಾಗಲಿದೆ.

    2026ಕ್ಕೆ ಯಶ್ ಡಬಲ್‌ ಧಮಾಕ!

    ಮುಂದಿನ ವರ್ಷ ರಾಕಿಭಾಯ್‌ ಫ್ಯಾನ್ಸ್‌ ಗೆ ಡಬಲ್‌ ಧಮಾಕ. ಒಂದ್ಕಡೆ ಟಾಕ್ಸಿಕ್‌ ಸಿನಿಮಾ ಮಾರ್ಚ್‌ 19ಕ್ಕೆ ತೆರೆಗೆ ಬರ್ತಿದೆ. ಆದಾದ ಬಳಿಕ ರಾಮಾಯಣ ಬಿಡುಗಡೆಯಾಗಲಿದೆ. ಈ ಮೂಲಕ ಯಶ್‌ ತಮ್ಮ ಎರಡು ಬಹುನಿರೀಕ್ಷಿತ ಸಿನಿಮಾಗಳ ಮೂಲಕ ಮುಂದಿನ ವರ್ಷ ಬೆಳ್ಳಿತೆರೆ ಅಖಾಡದಲ್ಲಿ ಧೂಳ್‌ ಎಬ್ಬಿಸಲಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಕಾಂತಾರ ಶೂಟಿಂಗ್ ಸೆಟ್ ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ: ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲ್ಮ್ಸ್‌ !

    June 15, 2025

    ಭಯೋತ್ಪಾದಕರನ್ನು ಮುಸ್ಲಿಮರೆಂದು ನಾನೆಂದು ಪರಿಗಣಿಸುವುದಿಲ್ಲ: ಆಮಿರ್ ಖಾನ್!

    June 15, 2025

    ಏರ್ ಇಂಡಿಯಾ ವಿಮಾನ ದುರಂತದ ವಿಡಿಯೋ ಮಾಡಿದ ಯುವಕ ಈತನೇ ನೋಡಿ!

    June 15, 2025

    ಏರ್ ಇಂಡಿಯಾ ವಿಮಾನ ದುರಂತ: ಡಿಎನ್‌ಎ ಮ್ಯಾಚ್, ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ!

    June 15, 2025

    ಮತ್ತೊಂದು ವಿಮಾನ ಅಪಘಾತ: ಕೇದಾರನಾಥಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್​ ಪತನ – 6 ಮಂದಿ ಸಾವು!

    June 15, 2025

    ಗೋಲ್ಡ್ ಪ್ರಿಯರಿಗೆ ಶಾಕ್: ನಿಲ್ಲದ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ಇಂದಿನ ದರಪಟ್ಟಿ!

    June 15, 2025

    ವಿಮಾನ ದುರಂತ: ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು!

    June 14, 2025

    ಭಾರೀ ಮಳೆ: ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ!

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    Ahmedabad Plane Crash: ಎರಡು ಬಾರಿ ಲಂಡನ್ ಟಿಕೆಟ್ ರದ್ದುಗೊಳಿಸಿದ್ದ ವಿಜಯ್ ರೂಪಾನಿ..!

    June 14, 2025

    ಸೂಪರ್‌ ಸ್ಟಾರ್ ರಜನಿಕಾಂತ್‌ ಸಂಬಂಧಿ ಜೊತೆ ಎಸ್ಆರ್‌ಎಚ್‌ ಓನರ್ ಕಾವ್ಯಾ ಮಾರನ್ ಕಲ್ಯಾಣ? ‌‌

    June 14, 2025

    ಬೆಂಗಳೂರಿನ 30 ವರ್ಷದ ಹಳೆ ದೇಗುಲಕ್ಕೆ ಭೇಟಿ ಕೊಟ್ಟ ನಟಿ ಕಂಗನಾ ರನೌತ್‌!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.