ದಾವಣಗೆರೆ: ಯತ್ನಾಳ್ ನಕಲಿ ಹಿಂದೂ, ವಿಜಯಪುರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಗೊತ್ತಿದೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ನೀವು ಈ ಹಿಂದೆ ಜೆಡಿಎಸ್ಗೆ ಯಾಕೆ ಹೋಗಿದ್ದು? ಟಿಪ್ಪು ಅವತಾರ ಯಾಕೆ ತಾಳಿದ್ರಿ?. ಇಫ್ತಿಯಾರ್ ಕೂಟದಲ್ಲಿ ಯಾಕೆ ಭಾಗಿಯಾಗಿದ್ರಿ. ಹಿಂದೂ ಹುಲಿ ಅಲ್ಲ ಇಲಿ, ಆಚಾರದಲ್ಲಿ ಹಿಂದುತ್ವ ಇರಬೇಕು,
ಪ್ರಚಾರದಲ್ಲಿ ಅಲ್ಲ. ಯತ್ನಾಳ್ ನಕಲಿ ಹಿಂದೂ, ವಿಜಯಪುರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಗೊತ್ತಿದೆ. ಹರಕು ಬಾಯಿಯಿಂದ ಈ ಪರಿಸ್ಥಿತಿ ಬಂದಿದೆ. ಬಲಿಪಶು ಆಗುತ್ತೀರಿ ಎಂದಿದ್ದೆ, ಅದು ಸತ್ಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋಕೆ ಕಾರಣ ನೀವೇ. ಬಿಎಸ್ವೈ ಮೀಸಲಾತಿ ಕೊಡುತ್ತೇವೆ ಅಂದಾಗ ಬ್ರೇಕ್ ಹಾಕಿದ್ರು. ಬಿಎಸ್ವೈ ಕೈಕಾಲು ಹಿಡಿದ ಆಡಿಯೋ ವಿಡಿಯೋ ಬಿಡುಗಡೆ ಮಾಡಬೇಕಾ?” ಎಂದು ಪ್ರಶ್ನಿಸಿದ್ದಾರೆ.