ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಹೇಳಿಕೆಗೆ ಸಂಗೀತ ನಿರ್ದೇಶಕ ಹಂಸಲೇಖ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ: ಶುಕ್ರವಾರದ ರಾಶಿ ಭವಿಷ್ಯ30 ಮೇ 2025!
ಈ ಸಂಬಂಧ ಮಾತನಾಡಿದ ಅವರು, ಮಿಸ್ಟರ್ ತಮಿಳು ಹಾಸನ್. ನೀವು ತಮಿಳು ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ ಎಂದು ನಮ್ಮ ಸಂಗೀತ ಶಾಲೆಯ ವಿದ್ಯಾರ್ಥಿಗಳು ನಿಮಗೆ ಮನವಿ ಮಾಡಿದ್ದಾರೆ. ಮಾತು ಮನೆ ಕೆಡಿಸ್ತು. ತೂತು ಒಲೆ ಕೆಡಿಸ್ತು ಅಂತ ನಮ್ಮ ಕಡೆ ಒಂದು ಗಾದೆ ಇದೆ. ಮಾತು ಎಷ್ಟು ತೊಂದರೆ ಕೊಡುತ್ತೆ ನೋಡಿ’ ಎಂದು ಹಂಸಲೇಖ ಹೇಳಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ತೆಂಕಣವನ್ನು ಕಟ್ಟಬೇಕು ಎಂಬುದು ಅವರ ಕನಸು. ಅವರ ಕನಸಿಗೆ ನಿಮ್ಮ ಮಾತು ಸಹಾಯ ಮಾಡಬೇಕು. ನೀವು ಆ ಪಕ್ಷದ ಮಿತ್ರ ಪಕ್ಷ. ನೀವು ಒಳ್ಳೆಯ ಮಾತಾಡಬೇಕು, ಯೋಚಿಸಿ ಮಾತಾಡಬೇಕು’ ಎಂದು ಹಂಸಲೇಖ ಅವರು ಕಮಲ್ ಹಾಸನ್ಗೆ ಬುದ್ಧಿ ಹೇಳಿದ್ದಾರೆ.
ನಾವು ಕನ್ನಡಿಗರು ಭಾಷಾಪ್ರಿಯರು. ಭಾಷಾಂಧತೆ ನಮಗೆ ಇಲ್ಲ. ನಮ್ಮ ಕನ್ನಡದೇಶದ ಸಾಂಸ್ಕೃತಿಕ ರಾಯಭಾರಿ ಬಸವಣ್ಣ. ಬಸವಣ್ಣ ನಮಗೆ ಕೊಟ್ಟಿದ್ದು ವಚನಗಳು. ನಾವು ವಚನಗಳಿಗೆ ಯಜಮಾನರು. ವಚನ ಎಂದರೆ ಮಾತು ಸ್ವಾಮಿ. ಮಾತು ಎಚ್ಚರಿಕೆಯಿಂದ ಆಡಬೇಕು. ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಭಾಷೆ ಅಂತ ವಿದ್ವಾಂಸರು ಹೇಳ್ತಾರೆ. ಅದರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ’ ಎಂದಿದ್ದಾರೆ.