ಹುಬ್ಬಳ್ಳಿ: ಈಗಲು ಹೋಗಿ ಯುವಕ ಸಾವು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಉಣಕಲ್ ನಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ನಿವಾಸಿ ಸಿದ್ಧಾರ್ಥ ಕನಕಣ್ಣವರ( 18) ಮೃತ ಯುವಕ ನಾಗಿದ್ದಾನೆ..
ಹುಬ್ಬಳ್ಳಿಯ ಬೆಂಗೇರಿಯಲ್ಲಿ ವಾಸವಿದ್ದ ಸಿದ್ಧಾರ್ಥ ಕನಕಣ್ಣವರ ಹೊಟೇಲ್ ನಲ್ಲಿ ಕೆಲಸ ಮಾಡುತಿದ್ದನು. ಗುರುವಾರ ಬೆಳಗ್ಗೆ ಉಣಕಲ್ ಕೆರೆಗೆ ಈಜಲು ಹೋಗಿದ್ದ ವೇಳೆ ಈ ಅವಘಡ ನಡೆದಿದೆ. ಪೊಲೀಸರು ಮೃತ ಯುವಕನ ಶವ ಹೊರ ತೆಗೆದಿದ್ದು, ಮೃತ ಯುವಕನ ತಾಯಿ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.