ರಾಯಚೂರು : ಕಂಪನಿಯ ಅಧಿಕಾರಿಗಳ ನಿರ್ಲಕ್ಷದಿಂದ ಒಂದು ಯುವಕ ಬಲಿಯಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ನಡೆದಿದೆ.
ಡೆಮಾಲಿಷನ್ ಮಾಡಿರುವ ಕಾರ್ಮಿಕರ ಮನೆಗಳಲ್ಲಿ ಕರೆಂಟ್ ಡಿಸ್ಕನೆಟ್ ಮಾಡದ ಕಾರಣ ಅಮಾಯಕ ಜೀವ ಬಲಿಯಾಗಿದೆ. ಅಲ್ಲಿದ್ದ ಪ್ಲಾಸ್ಟಿಕ್ ಸೇರಿದಂತೆ ಗುಜರಿ ಸಾಮಾನುಗಳ ತೆಗೆದುಕೊಳ್ಳಲು ಬಂದಿದ್ದ ಅಂಬರೀಶ್ (19) ಯುವಕ ಕರೆಂಟ್ ವೈರ್ ತುಳಿದು, ಸಾವನ್ನಪ್ಪಿದ್ದಾನೆ. ಕರೆಂಟ್ ಡಿಸ್ ಕನೆಕ್ಟ್ ಮಾಡದೆ ಹಾಗೆ ಬಿಟ್ಟಿರುವ ಕಂಪನಿಯ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಡಿರೌಡಿಗಳ ಅಟ್ಟಹಾಸ ; ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿದು ಪರಾರಿ
ನಿರ್ಲಕ್ಷ ವಹಿಸಿರುವ ಕಂಪನಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಸ್ಥಳೀಯರ ಪಟ್ಟು ಹಿಡಿದಿದ್ದಾರೆ.