ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಆಂಡ್ರ್ಯೂ ಫ್ಲಿಂಟಾಫ್ 2022 ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತವನ್ನು ನೆನಪಿಸಿಕೊಳ್ಳುತ್ತಾ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಸರ್ರೆಯ ಡನ್ಸ್ಫೋಲ್ಡ್ ಪಾರ್ಕ್ ಏರೋಡ್ರೋಮ್ನಲ್ಲಿ ಬಿಬಿಸಿಯ ಜನಪ್ರಿಯ ಆಟೋಮೊಬೈಲ್ ಶೋ “ಟಾಪ್ ಗೇರ್” ಚಿತ್ರೀಕರಣ ಮಾಡುತ್ತಿದ್ದಾಗ, ಫ್ಲಿಂಟಾಫ್ ಚಲಾಯಿಸುತ್ತಿದ್ದ ತ್ರಿಚಕ್ರ ವಾಹನ (ಮಾರ್ಗನ್ ಸೂಪರ್ 3) ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ, ಪಲ್ಟಿಯಾಗಿ ಉರುಳಿತು. ಅಪಘಾತದಲ್ಲಿ ಅವರ ಮುಖ ಮತ್ತು ಪಕ್ಕೆಲುಬುಗಳಿಗೆ ಗಂಭೀರ ಗಾಯಗಳಾಗಿವೆ. ಫ್ಲಿಂಟಾಫ್ ಅವರ ಕಾಲಿನಲ್ಲಿ ಸೀಳಿದಂತೆ ಕಂಡುಬಂದ ಗಾಯಗಳಿಂದಾಗಿ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಯಿತು. ಈ ಘಟನೆಯ ನಂತರ, ಬಿಬಿಸಿ ಕಾರ್ಯಕ್ರಮದ ನಿರ್ಮಾಣವನ್ನು ಸ್ಥಗಿತಗೊಳಿಸಿತು ಮತ್ತು ಹಿಂದಿನ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ £9 ಮಿಲಿಯನ್ ಪರಿಹಾರವನ್ನು ನೀಡಿತು. https://ainkannada.com/did-you-know-mango-prevents-weight-gain/ ಈಗ ಡಿಸ್ನಿ+ ಸಾಕ್ಷ್ಯಚಿತ್ರದಲ್ಲಿ ಮಾತನಾಡುತ್ತಾ, ಘಟನೆಯ ಬಗ್ಗೆ ಮಾತನಾಡುವಾಗ ಫ್ಲಿಂಟಾಫ್ ಭಾವುಕರಾದರು. “ನಾನು ಸತ್ತಿದ್ದೇನೆ ಎಂದು ನಾನು ಭಾವಿಸಿದೆ. ನನಗೆ ಪ್ರಜ್ಞೆ ಇತ್ತು ಆದರೆ ನನಗೆ ಏನೂ ಕಾಣಲಿಲ್ಲ. ನನ್ನ ಜೀವನ ಇಷ್ಟೇನಾ? ನನ್ನ ಉಳಿದ ದಿನಗಳಲ್ಲಿ ನಾನು…
Author: Author AIN
ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ನಗರದ ಮೂರುಸಾವಿರಹ ಮಠದಲ್ಲಿ ಏ. 27 ರಿಂದ 30 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಹೇಳಿದರು. ನಗರದಲ್ಲಿಂದುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 27 ರಂದು ಬೆಳಿಗ್ಗೆ 8.30 ಗಂಟೆಗೆ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಷಟಸ್ಥಲ ಧ್ವಜಾರೋಹಣ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ, ವೀರಶೈವ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಹಾಗೂ ಸಿದ್ಧಾರೂಢಮಠದ ಧರ್ಮದರ್ಶಿ ಮಂಜುನಾಥ ಎಸ್. ಮುನವಳ್ಳಿ ಭಾಗವಹಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಬೈಕ್ ರ್ಯಾಲಿ ನಡೆಯಲಿದ್ದು, ಬಸವಣ್ಣನವರ ಭಾವಚಿತ್ರ ಭವ್ಯ ಮೆರವಣಿಗೆಮುಖ್ಯ ಅತಿಥಿಗಳಾಗಿ ವಸಂತ ಹೊರಟ್ಟಿ, ನಾಗರಾಜ ಗೌರಿ, ಸಂಕಲ್ಪ ಶೆಟ್ಟರ ಆಗಮಿಸಲಿದ್ದಾರೆ ಎಂದರು. https://ainkannada.com/did-you-know-mango-prevents-weight-gain/ ಏ. 28 ರಂದು ಸಂಜೆ 4 ಗಂಟೆಗೆ ಮಹಿಳೆಯರಿಂದ ಮತ್ತು…
ಭಾರತ ಇತ್ತೀಚೆಗೆ ಒಂದು ತೀವ್ರ ಆತಂಕಕಾರಿ ಘಟನೆಯನ್ನು ಎದುರಿಸಿದೆ. ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡರು. ಈ ಘಟನೆ ದೇಶಾದ್ಯಂತ ಆಕ್ರೋಶ ಮತ್ತು ಕೋಪಕ್ಕೆ ಕಾರಣವಾಗಿದೆ. ಈ ಆಕ್ರೋಶಕ್ಕೆ ಪ್ರತೀಕಾರವಾಗಿ, ಕ್ರೀಡಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಫ್ಯಾನ್ಕೋಡ್ ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನ ನೇರ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ. ಇದು ಕೇವಲ ಸರಳ ನಿರ್ಧಾರವಲ್ಲ. ಭಾರತದ ಜನರ ಭಾವನೆಗಳಿಗೆ ಬೆಂಬಲವಾಗಿ ನಿಲ್ಲುವ ಒಂದು ದಿಟ್ಟ ನಿರ್ಧಾರ. ಮಂಗಳವಾರ ಮಧ್ಯಾಹ್ನ ನಡೆದ ದಾಳಿಯ ನಂತರ, ಫ್ಯಾನ್ಕೋಡ್ ತನ್ನ ಅಪ್ಲಿಕೇಶನ್ನಿಂದ PSL-ಸಂಬಂಧಿತ ನೇರ ಪ್ರಸಾರಗಳು, ವೀಡಿಯೊಗಳು, ಮುಖ್ಯಾಂಶಗಳು ಮತ್ತು ಪೂರ್ಣ ಹೊಂದಾಣಿಕೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. https://ainkannada.com/did-you-know-mango-prevents-weight-gain/ ಈ ಹಿನ್ನೆಲೆಯಲ್ಲಿ ಈ ವರ್ಷದ ಏಪ್ರಿಲ್ 11 ರಂದು ಆರಂಭವಾದ ಪಾಕಿಸ್ತಾನ ಸೂಪರ್ ಲೀಗ್ನ 10 ನೇ ಆವೃತ್ತಿಯು ಮೇ 18 ರವರೆಗೆ ನಡೆಯಲಿದೆ. ಐಪಿಎಲ್ ಪ್ರಸಾರ ಹಕ್ಕುಗಳಿಗಾಗಿ ಪೈಪೋಟಿ ನಡೆಸುವ ಹಂತಕ್ಕೆ ತಲುಪಿರುವ ಪಿಎಸ್ಎಲ್ಗೆ…
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಕೆ.ವ್ಹಿ.ಹುಲಕೋಟಿ ಅವರ 1.5 ಎಕರೆ ಕ್ಷೇತ್ರದಲ್ಲಿರುವ ಮನೆ ಮತ್ತು ಸುತ್ತಲಿನ ವೈವಿದ್ಯಮಯ ಸಸ್ಯ ಗಿಡಗಳಿಂದ ಕಂಗೊಳಿಸುತ್ತಿರುವ “ನಂದನ ವನ” ಇನ್ನೂಬ್ಬರಿಗೆ ಮಾದರಿಯಾಗಿದೆ. ಬಯಲು ನಾಡಿನ ನವಲಗುಂದ ತಾಲೂಕಿನ ಈ ಹಳ್ಳಿ ಚಿಲಕವಾಡ ಗ್ರಾಮದಲ್ಲಿ ಅದೆಂಥ ತೋಟ ಅಂತಾ ನನಗೂ ಕುತೂಹಲವಾಗಿತ್ತು ಈ ನಂದನವನ ಆವರಣಕ್ಕೆ ಕಾಲಿಟ್ಟಾಗ ಒಂದು ರೀತಿಯ ಅಚ್ಚರಿಯ ಮಲೆನಾಡಿನಲ್ಲಿ ಬಂದಂತಹ ಅನುಭವವಾಯಿತು. ಶ್ರೀ ಕೆ.ವ್ಹಿ.ಹೊಲಕೋಟಿಯವರು ಪ್ರಾಥಮಿಕ ಶಿಕ್ಷಣ ಚಿಲಕವಾಡ ಗ್ರಾಮದಲ್ಲಿ ಹಾಗೂ ಹೆಚ್ಚಿನ ವ್ಯಾಸಂಗ ಧಾರವಾಡದ ಯುನಿವರ್ಸಿಟಿಯಲ್ಲಿ ಸಸ್ಯಶಾಸ್ತ್ರದಲ್ಲಿ ಉನ್ನತ ಪದವಿ (ಎಮ್.ಎಸ್.ಸಿ) ಮುಗಿಸಿ 3 ವರ್ಷ (1971-74) ವರೆಗೆ ಹುನಗುಂದದ ಶ್ರೀ ವಿಜಯ ಮಹಾಂತೇಶ ಆರ್ಟ & ಸಾಯಿನ್ಸ ಕಾಲೇಜದಲ್ಲಿ ಉಪನ್ಯಾಸಕರ ವೃತ್ತಿ 1974 ರಲ್ಲಿ ರಾಜಿನಾಮೆ ನೀಡಿ ಸ್ವಂತ ಊರಾದ ಚಿಲಕವಾಡದಲ್ಲಿ ಕೃಷಿಯನ್ನು ಪೂರ್ಣ ಪ್ರಮಾಣದಲ್ಲಿ ವ್ಯವಸಾಯವನ್ನು ಕೈಗೊಂಡು ಸುಮಾರು ನೂರಾರು ಎಕರೆ ಜಮೀನು ಒಣಬೇಸಾಯ ಪದ್ದತಿ ಒಳಪಡಿಸಿ ಸಾವಯವ ರೀತಿಯಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ಇತರೆ…
ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಸಿಹಿಗೆಣಸು ಬೆಳೆಯಲಾಗುತ್ತಿದ್ದು, ಬಹುಪಾಲು ಸಿಹಿಗೆಣಸು ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜಾಗುತ್ತವೆ. ಹೆಚ್ಚಿನ ಭಾಗದ ರೈತರು ಇದನ್ನು ಬೆಳೆಯುವುದಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾಗಿ ಬಹಳಷ್ಟು ರೈತರಿಗೆ ಸಿಹಿ ಗೆಣಸು ಕೂಡ ಒಂದು ಲಾಭದಾಯಕ ಬೆಳೆ ಎಂಬ ವಿಷಯ ಗೊತ್ತಿಲ್ಲ. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಇನ್ನೊಂದೆಡೆ ಈ ಬೆಳೆಗೆ ಹೊಂದಿಕೆಯಾಗುವ ಮಣ್ಣು ಎಲ್ಲೆಡೆ ಇಲ್ಲದಿರುವುದು ಕೂಡ ಬೇರೆ ಭಾಗದ ರೈತರು ಸಿಹಿ ಗೆಣಸು ಬೆಳೆಯಲು ಆಸಕ್ತಿ ತೋರಿಸದೇ ಇರುವುದಕ್ಕೆ ಕಾರಣವಿರಬಹುದು. ಹಾಗಂತ ಬೇರೆ ಜಿಲ್ಲೆಗಳ ರೈತರು ಗೆಣಸು ಬೆಳೆಯಲು ಪ್ರಯತ್ನಿಸಿಲ್ಲ ಎಂದಲ್ಲ. ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣದಲ್ಲಿ ತುಮಕೂರು, ಕೋಲಾರ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳ ರೈತರು ಸಿಹಿ ಗೆಣಸು ಬೆಳೆದಿದ್ದಾರೆ. ಕೆಲವರು ಅಧಿಕ ಲಾಭವನ್ನೂ ಗಳಿಸಿದ್ದಾರೆ. ಮಣ್ಣು, ಹವಾಗುಣ ಹಗುರವಾದ ರಚನೆಯನ್ನು ಹೊಂದಿರುವ ಹಾಗೂ ಅತ್ಯಂತ ಫಲವತ್ತಾಗಿರುವ ಮರಳು ಮಿಶ್ರಿತ ಗೋಡು ಮಣ್ಣು ಸಿಹಿ ಗೆಣಸು ಬೆಳೆಯಲು ಸೂಕ್ತವಾಗಿದೆ. ಈ ವಿಧದ ಮಣ್ಣು ಸಡಿಲವಾಗಿರುವುದರಿಂದ ಗೆಣಸುಗಳು ನೆಲದಲ್ಲಿ…
ಸದ್ಯ ಭಾರತದಲ್ಲಿ ಮಾವಿನ ಹಣ್ಣಿನ ಸೀಸನ್ ಜೋರಾಗಿಯೇ ಇದೆ. ಎಲ್ಲೇ ನೋಡಿದರೂ ಬಗೆಬಗೆಯ ಮಾವಿನ ಹಣ್ಣುಗಳನ್ನು ಕಾಣಬಹುದು. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಈ ಸಮಯದಲ್ಲಿ ಕೊಳ್ಳದವರೇ ಇಲ್ಲ ಸವಿಯದವರೇ ಇಲ್ಲ ಎನ್ನಬಹುದು! ತನ್ನಲ್ಲಿ ನೈಸರ್ಗಿಕವಾಗಿ ಸಿಗುವ ಅಪ್ರತಿಮ ರುಚಿಯನ್ನು ಹೊಂದಿರುವ, ಈ ಹಣ್ಣುಗಳನ್ನು ಮನೆಯಲ್ಲಿ ಹಿರಿಯರಿಂದ ಹಿಡಿದು, ಸಣ್ಣ ಮಕ್ಕಳವರೆಗೂ ಕೂಡ ಇಷ್ಟವಾಗುತ್ತದೆ. ಮಾವಿನಹಣ್ಣುಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಮತ್ತು ಆಹಾರದ ಫೈಬರ್ಗಳಿಂದ ತುಂಬಿರುತ್ತವೆ, ಆದರೆ ಅತಿಯಾದ ಸೇವನೆಯು ತೊಂದರೆಗೊಳಗಾಗಬಹುದು ಮತ್ತು ತೂಕ ನಷ್ಟದ ಪ್ರಯಾಣವನ್ನು ಹಳಿತಪ್ಪಿಸಬಹುದು. ಮಾವಿನಹಣ್ಣನ್ನು ಮಿತವಾಗಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ನಿಮ್ಮ ಮಾನಸಿಕ ಆರೋಗ್ಯ, ಹೃದಯದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ನಾರಿನಂಶ ಸಮೃದ್ಧವಾಗಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮಾವಿನಹಣ್ಣುಗಳನ್ನು ತಿನ್ನುವುದರಿಂದ ಉರಿಯೂತ, ಅಜೀರ್ಣ ಮತ್ತು ಅತಿಸಾರದಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಮಾವಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪೊಟ್ಯಾಸಿಯಮ್…
ಕಿಚ್ಚ ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಮೊದಲ ಹಂತದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ.. ಸುಮಾರು 20 ದಿನಗಳ ಮೊದಲ ಶೆಡ್ಯೂಲ್ನಲ್ಲಿ ಫೈಟ್ ಸೀಕ್ವೆನ್ಸ್ ಚಿತ್ರೀಕರಣ ನಡೆಸಲಾಗ್ತಿದೆ.. ಅಂದ್ಹಾಗೆ ಬೃಹತ್ ಸೆಟ್ ಒಂದರಲ್ಲಿ ಚಿತ್ರೀಕರಣ ನಡೀತಿದ್ದು, ಚಿತ್ರೀಕರಣದ ಸುತ್ತಲೂ ಟೈಟ್ ಸೆಕ್ಯೂರಿಟಿ ನೀಡಲಾಗಿದೆ.. ಚಿತ್ರೀಕರಣದಲ್ಲಿ ಯಾರೂ ಮೊಬೈಲ್ ಬಳಸದಂತೆ, ದೃಶ್ಯಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗ್ತಿದೆ. ಬಿಲ್ಲಾ ರಂಗ ಭಾಷಾ ನಾಯಕಿ ಯಾರು ಅನ್ನೋ ಪ್ರಶ್ನೆಗೆ ಒಂದು ಹಿಂಟ್ ಸಿಕ್ಕಿದೆ.. ಮೂಲಗಳ ಪ್ರಕಾರ ಮಿಸ್ ಇಂಡಿಯಾ 2024ರ ವಿನ್ನರ್ ನಿಖಿತಾ ಪೊರ್ವಲ್ ಕಿಚ್ಚನಿಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಮತ್ತೊಂದು ನಾಯಕಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸೋ ಸಾಧ್ಯತೆ ಹೆಚ್ಚಿದೆ. ಬಹುಭಾಷಾ ನಟಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಗುಲ್ಲೆದಿತ್ತು. ಬಿಲ್ಲ ರಂಗ ಭಾಷಾ ಮೂಲಕ ಕನ್ನಡಕ್ಕೆ ಕರಾವಳಿ ಸುಂದ್ರಿ ಎಂಟ್ರಿಯಾಗಲಿದ್ದಾರೆ ಎಂಬ ಸಮಾಚಾರ ಹರಿದಾಡಿತ್ತು. ಈ ಪೂಜಾ…
ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದರು. ಉನಾದ್ಕತ್ ಎಸೆತದಲ್ಲಿ ಜಯದೇವ್ ಸಿಕ್ಸರ್ ಬಾರಿಸುವ ಮೂಲಕ ಮುಂಬೈ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಲ್ಲಿಯವರೆಗೆ, ರೋಹಿತ್ ಮುಂಬೈ ಪರ ಒಟ್ಟು 259 ಸಿಕ್ಸರ್ಗಳನ್ನು ಬಾರಿಸಿದ್ದಾರೆ, ಇದರಲ್ಲಿ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಪಂದ್ಯಗಳು ಸೇರಿವೆ. ಇದರೊಂದಿಗೆ ಅವರು ಈ ಹಿಂದೆ 258 ಸಿಕ್ಸರ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಕೀರನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿದರು. ಸೂರ್ಯಕುಮಾರ್ ಯಾದವ್ 127 ಸಿಕ್ಸರ್ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ 115 ಸಿಕ್ಸರ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಇಶಾನ್ ಕಿಶನ್ 106 ಸಿಕ್ಸರ್ಗಳೊಂದಿಗೆ ಇದ್ದಾರೆ, ಆದರೆ ಅವರು ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ರೋಹಿತ್ ಶರ್ಮಾ ಅವರು ಇಲ್ಲಿಯವರೆಗೆ 12,000 ಕ್ಕೂ ಹೆಚ್ಚು ಟಿ20 ರನ್ ಗಳಿಸಿದ್ದಾರೆ ಮತ್ತು…
ಬೆಂಗಳೂರು: 9 ಕೋಟಿ ಗೋಲ್ಡ್ ಖರೀದಿಸಿ ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಐಶ್ವರ್ಯ ಅಲಿಯಾಸ್ ನವ್ಯಶ್ರೀಯ ಬೆಂಗಳೂರು ಹಾಗೂ ಮಂಡ್ಯದ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಶ್ವರ್ಯ ಅವರ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆದಿದ್ದು, https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಕಡತಗಳು ಹಾಗೂ ದಾಖಲೆಗಳ ಶೋಧ ಮಾಡಿದ್ದಾರೆ. ಇಬ್ಬರು ಸಿಆರ್ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಈ ದಾಳಿ ನಡೆದಿದೆ. ಐಶ್ವರ್ಯ ಗೌಡ ವಿರುದ್ಧ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನ ವಂಚನೆ ಮಾಡಿದ ಆರೋಪವಿದೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು.
ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಜೈಲರ್ 2 ಅಂಗಳದಿಂದ ಮತ್ತೊಂದು ಕ್ರೇಜಿಯೆಸ್ಟ್ ಸಮಾಚಾರ ಹೊರಬಿದ್ದಿದೆ. ಈಗಾಗಲೇ ತಾರಾಬಳಗದ ಮೂಲಕ ಸುದ್ದಿಯಾಗಿರುವ ಜೈಲರ್ ಸೀಕ್ವೆಲ್ ಗೆ ದಕ್ಷಿಣ ಚಿತ್ರರಂಗದ ಬಹುಮುಖ ಪ್ರತಿಭೆ ನಟ ಫಹಾದ್ ಫಾಸಿಲ್ ಎಂಟ್ರಿ ಕೊಡಲಿದ್ದಾರಂತೆ. ನಟ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಟಿಸೋದು ಖಚಿತವಾಗಿದ್ದು, ತೆಲುಗಿನ ಬಾಲಯ್ಯ ಕೂಡ ಜೈಲರ್ 2 ಭಾಗವಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಪುಷ್ಪ ಖಳನಾಯಕ ಫಹಾದ್ ಫಾಸಿಲ್ ಕೂಡ ಈ ಚಿತ್ರದಲ್ಲಿರಲಿದ್ದಾರೆ ಎಂಬ ಗುಲ್ಲೆದಿದೆ. ರಜನಿಯ ವೆಟ್ಟೈಯನ್ ನಲ್ಲಿ ನಟಿಸಿದ್ದ ಫಹಾದ್ ಫಾಸಿಲ್ ಮತ್ತೊಮ್ಮೆ ತಲೈವರ್ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಫಹಾದ್ ಗಾಗಿ ನಿರ್ದೇಶಕ ನೆಲ್ಸನ್ ದೀಲಿಪ್ ಕುಮಾರ್ ವಿಭಿನ್ನವಾದ ಪಾತ್ರ ಡಿಸೈನ್ ಮಾಡುತ್ತಿದ್ದಾರಂತೆ. ಶೀಘ್ರದಲ್ಲೇ ಜೈಲರ್ ಸೀಕ್ವೆಲ್ ಗೆ ಫಹಾದ್ ಎಂಟ್ರಿ ಬಗ್ಗೆ ಸನ್ ಪಿಕ್ಚರ್ಸ್ ಮಾಹಿತಿ ನೀಡಲಿದೆಯಂತೆ. ಜೈಲರ್ ಮೊದಲ ಭಾಗ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. ಬರೋಬ್ಬರಿ 600 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ…