Author: Author AIN

ಇಂದ್ರಜಿತ್ ಲಂಕೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ “ಗೌರಿ” ಸಿನಿಮಾ ಕಳೆದವರ್ಷ ತೆರೆ ಕಂಡು ಜನಪ್ರಿಯವಾಗಿತ್ತು ಹಾಗೂ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಯುವಜನತೆಯಂತೂ ಸಮರ್ಜಿತ್ ಅಭಿನಯಕ್ಕೆ ಫಿದಾ ಆಗಿದ್ದರು.‌ ಆನಂತರ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಅಲ್ಲೂ ಸಹ ಈ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ.. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯದಾಗಿನಿಂದ ಹಿಡಿದು ಈವರೆಗೂ ಎರಡುವರೆ ಲಕ್ಷ ಗಂಟೆಗಳ ಕಾಲ‌ ಈ ಚಿತ್ರ ವೀಕ್ಷಣೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ಜನರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಸಮರ್ಜಿತ್ ಲಂಕೇಶ್ ಅವರಿಗೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಿಂದ ನಟಿಸಲು ಅವಕಾಶಗಳು ಬರುತ್ತಿದೆ. ನಾಯಕನಾಗಲೂ ಸಮರ್ಜಿತ್ ಪಟ್ಟ ಶ್ರಮಕ್ಕೆ ಪ್ರತಿಫಲ ದೊರಕುತ್ತಿದೆ. ಬಾಲಿವುಡ್‌ಗೆ ಸಮರ್ಜಿತ್? ಸಮರ್ಜಿತ್‌ ಸ್ಯಾಂಡಲ್‌ ವುಡ್‌ ಹೃತಿಕ್‌ ರೋಷನ್‌ ಎಂಬ ಬೋರ್ಡ್‌ ಬೆದ್ದಿದೆ. ಮೊದಲ ಚಿತ್ರದಲ್ಲಿಯೂ ಒಳ್ಳೆ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸಮರ್ಜಿತ್ ಲಂಕೇಶ್ ಡ್ಯಾನ್ಸ್, ಲುಕ್, ಮ್ಯಾನರಿಸಂ ಎಲ್ಲರಿಗೂ ಇಷ್ಟವಾಗಿದೆ. ಅದ್ಭುತ…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಎ2 ಆರೋಪಿ ದರ್ಶನ್‌ ನಿನ್ನೆ ವಿಚಾರಣೆಗೆ ಗೈರಾಗಿದ್ದು, ಈ ಬಗ್ಗೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆ ಕಡ್ಡಾಯವಾಗಿ ಹಾಜರಾಗಲೇಬೇಕೆಂದು ಸೂಚಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಿನ್ನೆ ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು, ನಟ ದರ್ಶನ್‌ ಹೊರತುಪಡಿಸಿ ಎಲ್ಲಾ ಆರೋಪಿಗಳು ವಿಚಾರಣೆ ಹಾಜರಾಗಿದ್ದರು. ಆದ್ರೆ, ಬೆನ್ನು ನೋವಿನ ಕಾರಣ ಹೇಳಿ ದರ್ಶನ್‌ ವಿಚಾರಣೆಗೆ ಗೈರಾಗಿದ್ದರು. ಈ ಬೆಳವಣಿಗೆ ನಡುವೆ ಇಂದು ದರ್ಶನ್‌ ಶಿಷ್ಯನ ಸಿನಿಮಾ ವೀಕ್ಷಣೆಗೆ ಸಜ್ಜಾಗಿದ್ದಾರೆ. ದರ್ಶನ್‌ ಜೈಲು ಸೇರಿದ ಮೇಲೆ ವಿಜಯಲಕ್ಷ್ಮೀ ನೆರಳಾಗಿ ನಿಂತು ಸ್ವಂತ ತಮ್ಮನಂತೆ ಜೈಲು, ಮನೆ ಕೋರ್ಟ್‌, ಕೇಸ್‌ ಅಂತಾ ಓಡಿದ್ದು ಡಿ ಪಡೆಯ ಒಬ್ಬನೇ ಒಬ್ಬ ಹುಡ್ಗ ಧ್ವನೀರ್.‌ ಧನ್ವೀರ್‌ ನಟನೆಯ ವಾಮನ ಸಿನಿಮಾ ನಾಳೆ ತೆರೆಗೆ ಬರ್ತಿದೆ. ಹೀಗಾಗಿ  ಇಂದು ವಾಮನ ಪ್ರೀಮಿಯರ್‌ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್‌ ನಲ್ಲಿಂದು ಸಂಜೆ 6.30ಕ್ಕೆ ವಾಮನ ಸಿನಿಮಾವನ್ನು ನಟ ದರ್ಶನ್‌…

Read More

ಅಹಮದಾಬಾದ್: ಗುಜರಾತ್‌ ರಾಜಧಾನಿ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕ ಭವನದಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.  ಸಭೆ ಬಳಿಕ ಪಟೇಲ್ ಸ್ಮಾರಕ ಭವನ ಮುಂಭಾಗ ಕಾಂಗ್ರೆಸ್‌ ನಾಯಕರ ಫೋಟೋ ಸೆಷನ್ ನಡೆಯಿತು. ಅದರ ಕೆಲ ಫೋಟೋಸ್‌ ಇಲ್ಲಿದೆ..

Read More

ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ ಮಮ್ಮಿಯಾಗಿ ಬಡ್ತಿ ಪಡೆದ್ದು ಆಗಿದೆ. ಸದ್ಯ ಮಗಳ, ಮನೆ, ಗಂಡ ಅಂತಾ ಬ್ಯುಸಿಯಾಗಿರುವ ಡಿಪ್ಪಿ ಈಗ ಶಾರುಖ್‌ ಖಾನ್‌ ಮಗಳಿಗೆ ತಾಯಿಯಾಗ್ತಿದ್ದಾರೆ. ಅರೇ! ನಿಜವಾ ಅಂತಾ ಅಚ್ಚರಿಪಡಬೇಡಿ. ಇದು ಸತ್ಯವೇ. ಆದರೆ ರಿಯಲ್‌ ನಲ್ಲಲ್ಲ. ಬದಲಾಗಿ ರೀಲ್‌ ನಲ್ಲಿ.  ದೀಪಿಕಾ ಪಡುಕೋಣೆ ಸಣ್ಣ ಗ್ಯಾಂಪ್‌ ಗಳಿಗೆ ಮತ್ತೆ ಇಂಡಸ್ಟ್ರೀಯತ್ತ ಮುಖ ಮಾಡುತ್ತಿರುವ ಹೊಸ ವಿಷಯ ಹೊರಬಿದ್ದಿದೆ. ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಕಿಂಗ್‌ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಎಂಟ್ರಿಯಾಗುತ್ತಿದ್ದಾರೆ. ಸುಹಾನಾ ತಾಯಿ ಪಾತ್ರ ಪೋಷಣೆ ಮಾಡಲಿದ್ದಾರಂತೆ ಬಿಟೌನ್‌ ಪದ್ಮಾವತಿ. ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ದೀಪಿಕಾ ತಾಯಿ ಪಾತ್ರದಲ್ಲಿ ನಟಿಸಿದ್ದು. ಆ ನಂತರ  ‘ಜವಾನ್’ ಸಿನಿಮಾದಲ್ಲೂ ಅದೇ ಪಾತ್ರ ಅವರನ್ನು ಹುಡುಕಿಕೊಂಡು ಬಂದಿತ್ತು, ಈಗ ಮತ್ತೊಮ್ಮೆ ಸುಹಾನಾ ತಾಯಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿದ್ದಾರ್ಥ್‌ ನಿರ್ದೇಶನದಲ್ಲಿ…

Read More

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದ ಸೀತಾ ಪಯಣ ಸಿನಿಮಾದಲ್ಲಿ ಪವರ್ ಫುಲ್ ರೋಲ್ ಪ್ಲೇ ಮಾಡಿದ್ದಾರೆ. ಶ್ರೀರಾಮನವಮಿ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಲಾಗಿದೆ. ಸೀತಾ ಪಯಣದಲ್ಲಿ ಧ್ರುವ ಪವನ್ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಗಡ್ ಲುಕ್ ನಲ್ಲಿ ಪೊಗರು ಪೋರ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ʼಸೀತಾ ಪಯಣʼವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಾವೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸೀತಾ ಪಯಣದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸಿದರೆ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಾಯಕಿಯಾಗಿ ನಟಿಸಿದ್ದಾರೆ. ನಿರಂಜನ್ ಮತ್ತು ಐಶ್ವರ್ಯ ಅರ್ಜುನ್ ಜೊತೆಗೆ ಪ್ರಕಾಶ್ ರೈ, ಸತ್ಯರಾಜ್ ಮುಂತಾದವರು ನಟಿಸಿದ್ದಾರೆ. ಸ್ವತಃ ಅರ್ಜುನ್ ಸರ್ಜಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಸೀತಾ ಪಯಣ’, ಪ್ರೀತಿ ಮತ್ತು ಭಾವನಾತ್ಮಕ ಕಥೆಯ ಅಡಿಯಲ್ಲಿ…

Read More

ಸ್ಯಾಂಡಲ್‌ ವುಡ್‌ ಕೃಷ್ಣ ಅಜಯ್‌ ರಾವ್‌ ಹೆಣ್ಣಿನ ಶೋಷಣೆ ವಿರುದ್ಧ ಸಮರ ಸಾರಿದ್ದಾರೆ. ಅದಕ್ಕಾಗಿಯೇ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಶೋಷಣೆಯನ್ನು ಯುದ್ಧಕಾಂಡ ಎಂಬ ಚಿತ್ರದ ಮೂಲಕ ಹೇಳೋದಿಕ್ಕೆ ಹೊರಟಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳು ಭಾರೀ ಸದ್ದು ಮಾಡಿವೆ. ಯುದ್ಧಕಾಂಡಕ್ಕಾಗಿ ಅಜಯ್‌ ರಾವ್ ತನ ಮನ ಹಾಗೇಯೇ ಧನ ಅರ್ಪಿಸಿ ಕೆಲಸ ಮಾಡಿದ್ದಾರೆ. ಯುದ್ಧಕಾಂಡ ಸಿನಿಮಾದಲ್ಲಿ ಅಜಯ್‌ ರಾವ್‌ ನಟಿಸಿ, ನಿರ್ಮಿಸಿದ್ದಾರೆ. ನಿರ್ಮಾಪಕರಾಗಿ ಈ ಚಿತ್ರ ಮಾಡಲು ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸಾಕಷ್ಟು ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಯುದ್ಧಕಾಂಡ ಚಿತ್ರಕ್ಕಾಗಿ ತಮ್ಮ ಮಗಳ ಅಚ್ಚುಮೆಚ್ಚಿನ ಕೋಟಿ ಬೆಲೆಯ BMW ಕಾರು ಮಾರಾಟ ಮಾಡಿದ್ದಾರೆ. ಕಾರು ಮಾರಾಟದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಜಯ್‌ ರಾವ್‌ ಮಗಳು ಚೆರ್ರಿ ಕಾರು ಮಾರಾಟದ ವಿಷ ತಿಳಿದು ಬಿಕ್ಕಿ ಬಿಕ್ಕಿ ಹತ್ತಿದ್ದಾಳೆ. ನನ್ನ ಅಚ್ಚುಮೆಚ್ಚಿನ ಕಾರು ತೆಗೆದುಕೊಂಡು ಹೋಗುತ್ತಿರುವುದಕ್ಕೆ ಕಣ್ಣೀರು ಹಾಕಿದ್ದಾಳೆ. https://www.youtube.com/watch?v=MjxGPEC-ztw&ab_channel=AINKannada ʻಯುದ್ಧಕಾಂಡʼ ಸಿನಿಮಾ…

Read More

ಬೆಂಗಳೂರು: ಹೌದು, ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಗಗನ ಕುಸುಮ. ಭದ್ರತಾ ದೃಷ್ಟಿಯಿಂದ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಸಭೆ ಸಮಾರಂಭಗಳು, ಸರ್ಕಾರಿ ಕಾರ್ಯಕ್ರಮಗಳು ನಡೆಯುವ ವೇಳೆ ವಿಧಾನಸೌಧ ಮುಂಭಾಗದ ಮೆಟ್ಟಿಲುಗಳು ಹಾಗೂ ಬ್ಯಾಕ್ವೆಂಟ್‌ ಹಾಲ್‌ ಗೆ ಸಾರ್ಜಜನಿಕರು ಹೋಗುವ ವ್ಯವಸ್ಥೆ ಇತ್ತು. ಆದರೆ, ಬಾಂಬ್‌ ಸ್ಫೋಟ, ಉಗ್ರರ ದಾಳಿ ಸಾಧ್ಯತೆಗಳ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಭಾರಿ ಭದ್ರತೆ ಕಲ್ಪಿಸಿ ಜನಸಾಮಾನ್ಯರ ಪ್ರವೇಶಕ್ಕೆ ಬ್ರೇಕ್‌ ಹಾಕಲಾಗಿತ್ತು. ಆದರೆ, ಇದೀಗ ವಿಧಾನಸೌಧ ನೋಡಲು ಬರೋರಿಂದಲೂ ಹಣ ವಸೂಲಿಗೆ ಸರ್ಕಾರ ಮುಂದಾಗಿದೆ. ಗ್ಯಾರಂಟಿಗಾಗಿ ಹಣ ವಸೂಲಿ ? ರಾಜ್ಯದಲ್ಲಿ ಯಾವುದೇ ವಸ್ತುಗಳ ಬೆಲೆ ಏರಿಕೆಯಾದರೆ, ಗ್ಯಾರಂಟಿಗಾಗಿ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಖಜಾನೆ ತುಂಬಿಕೊಳ್ಳಲು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಸಾಮಾನ್ಯವಾಗಿದೆ. ಇದೀಗ ರಾಜ್ಯದ ಪಾರಂಪರಕ ಕಟ್ಟಡಗಳಲ್ಲಿ ಒಂದಾದ ವಿಧಾನಸೌಧ ನೋಡಲು ದೇಶ-ವಿದೇಶಗಳಿಂದ, ರಾಜ್ಯದ ಹಳ್ಳಿ-ಹಳ್ಳಿಗಳಿಂದ ಸಾವಿರಾರು ಜನರು ಬರುತ್ತಾರೆ. ಇದೀಗ  ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ನಿಗಧಿ…

Read More

ಟಾಕ್ಸಿಕ್, ಭಾರತೀಯ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಸಿನಿಮಾ. ಮುಂದಿನ ವರ್ಷದ ಮಾರ್ಚ್19ಕ್ಕೆ ಬಹಳ ಅದ್ಧೂರಿಯಾಗಿ ತೆರೆಗೆ ಬರ್ತಿರುವ ಚಿತ್ರ. ಕೆಜಿಎಫ್ ಸರಣಿ ಸಿನಿಮಾ ಬಳಿಕ ರಾಕಿಭಾಯ್ ಯಶ್ ಭತ್ತಳಿಕೆಯಿಂದ ಬರ್ತಿರುವ ಈ ಮೆಗಾ ಪ್ರಾಜೆಕ್ಟ್ ಮೇಲೆ ಇನ್ನಿಲ್ಲದ ನಿರೀಕ್ಷೆಯಂತೂ ಇದೆ. ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್ ಜೊತೆಗೂಡಿ ಕೆಜಿಎಫ್ ಕಿಂಗ್ ಡ್ರಗ್ಸ್ ಕಥೆಯನ್ನು ಹರವಿಡೋದಿಕ್ಕೆ ಹೊರಟಿದ್ದಾರೆ. ಇಲ್ಲಿವರೆಗೂ ಟಾಕ್ಸಿಕ್ ತಾರಾಬಳಗದ ಬಗ್ಗೆ ಗುಟ್ಟುರಟ್ಟಾಗಿಲ್ಲ. ಆದ್ರೆ ಅವರು ನಟಿಸ್ತಿದ್ದಾರಂತೆ, ಇವರು ನಟಿಸ್ತಾರಂತೆ ಅನ್ನೋ ಬರೀ ಅಂತೇ ಕಂತೇಗಳ ಸಮಾಚಾರ ಕೇಳ್ತಿದ್ದೇವೆ. ಅದಕ್ಕೀಗ ಹೊಸ ಸೇರ್ಪಡೆ ಗುಬ್ಬಿ ವೀರಣ್ಣನ ಮೊಮ್ಮಗಳು ಬಿ ಜಯಶ್ರೀ. ರಂಗಭೂಮಿಯ ದಿಗ್ಗಜ ಗುಬ್ಬಿ ವೀರಣ್ಣನ ಮೊಮ್ಮಗಳು ಬಿ ಜಯಶ್ರೀ ಈಗ ಟಾಕ್ಸಿಕ್ ಭಾಗವಾಗಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಕಂಚಿನ ಕಂಠ, ಮನಮುಟ್ಟುವ ನಟನೆ, ನೇರಮಾತುಗಳಿಂದ ಖ್ಯಾತಿ ಪಡೆದವರು ಜಯಶ್ರೀಯಮ್ಮ.ಈ ಹೆಮ್ಮೆಯ ಕಲಾವಿದೆ ಈಗ ಯಶ್ ಟಾಕ್ಸಿಕ್ ನಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ…

Read More

ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಕಲಬೆರಕೆ ಆಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಕಳೆದ ತಿಂಗಳು ಪನ್ನೀರು, ಐಸ್‌ ಕ್ರೀಂ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ ಗೆ ಕಳುಹಿಸಲಾಗಿತ್ತು. ಬರೋಬ್ಬರಿ 230 ಪನ್ನೀರ್‌ ಸ್ಯಾಂಪಲ್ಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 30 ಮಾದರಿ ಪನ್ನೀರು ಸುರಕ್ಷಿತ, ಎರಡು ಮಾದರಿ ಪನ್ನೀರಿ ಸುರಕ್ಷಿತವಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಈ ಮಾರ್ಚ್ ನಲ್ಲಿ 1,891 ಔಷಧಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 1,298 ಉತ್ತಮ ಗುಣಮಟ್ಟದ ಔಷಧಿಗಳೆಂದು ಧೃಡಪಟ್ಟಿವೆ. 41 ಅನುತ್ತಮ ಎಂದು ಗೊತ್ತಾಗಿದೆ. ಮಾರ್ಚ್ ತಿಂಗಳಲ್ಲಿ 18 ಕೇಸ್ ಗಳನ್ನು ಹಲವು ಕಂಪನಿಗಳ ಮೇಲೆ ಹಾಕಿದ್ದೇವೆ. ರಿಂಗಲ್ ಲ್ಯಾಕ್ಟೇಟ್ ದ್ರಾವಣದ 196 ಮಾದರಿಗಳನ್ನು ಲ್ಯಾಬ್ ಗೆ ಕಳಿಸಲಾಗಿದ್ದು. 113 ಮಾದರಿಗಳು ಅನುತ್ತಮ ಎಂದು ಘೋಷಣೆಯಾಗಿದೆ ಎಂದಿದ್ದಾರೆ. ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣ ಬಳಕೆ ಖಚಿತಪಡಿಸಿಕೊಳ್ಳಲು 115 ಮಾದರಿಗಳನ್ನು…

Read More

ಮಾನ್ಯತೆ ಪಡೆಯದ ಐಪಿಎಲ್ ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದಡಿ ರೀಲ್ಸ್ ಸ್ಟಾರ್ಸ್ ಗೆ ಖಾಕಿ ಶಾಕ್ ಕೊಟ್ಟಿದೆ. ಸೋನು ಶ್ರೀನಿವಾಸ್ ಗೌಡ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಇನ್‌ ಫ್ಲುಯೆನ್ಸರ್‌ಗಳು ಸೈಬರ್ ಕ್ರೈಂ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಸೋನು ಶ್ರೀನಿವಾಸ್ಗೌಡ, ದೀಪಕ್ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕು ಹೆಚ್ಚು ಮಂದಿ ರೀಲ್ಸ್ ಸ್ಟಾರ್ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ಈ ವೇಳೆ ಬೆಟ್ಟಿಂಗ್ ಆಪ್ ಪ್ರಚಾರ ಮಾಡದಂತೆ ಪೊಲೀಸರು ಖಡಖ್ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೆ ರೀಲ್ಸ್ ಸ್ಟಾರ್ಗಳು ಇನ್ನು ಮುಂದೆ ಇಂತಹ ಜಾಹೀರಾತುಗಳನ್ನ ನಾವು ಪ್ರಕಟಿಸುವುದಿಲ್ಲ ಎಂದಿದ್ದಾರಂತೆ. ರೀಲ್ಸ್ ಸ್ಟಾರ್ಸ್ ಗಳು ತಮ್ಮ ಇನ್ಸ್ಟಾಗ್ರಾಂ ಪೇಜ್ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಬಗ್ಗೆ ಸ್ಟೋರಿಗಳನ್ನು ಹಾಕುತ್ತಿದ್ದರು. IPL ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೇಲ್ಸ್ ಮೇರೆಗೆ ಸ್ಟೋರಿ ಅಪ್ಲೋಡ್ ಮಾಡುತ್ತಿದ್ದರು ಅನ್ನೋದು ಇಲ್ಲಿ ಆರೋಪ. ಇದೀಗ ಹಣದ ಆಸೆಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್ಗಳಿಗೆ…

Read More