Author: Author AIN

ನವದೆಹಲಿ: ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಣ್ವಸ್ತ್ರ ಬಳಕೆಗೆ ಹಿಂಜರಿಕೆ ಮಾಡುವುದಿಲ್ಲ ಎಂದು  ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ. ಆದರೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಣ್ವಸ್ತ್ರ ಬಳಕೆಗೆ ಹಿಂಜರಿಕೆ ಮಾಡುವುದಿಲ್ಲ ಎಂಬ ನೀತಿಯನ್ನು ಭಾರತ ಅಳವಡಿಸಿಕೊಂಡಿದೆ ಎಂದರು. https://ainkannada.com/this-fruit-has-surprised-scientists-no-matter-how-serious-the-disease-it-will-cure-it/ ಭಾರತ ಶೌರ್ಯ & ಸಂಯಮ ಎರಡನ್ನೂ ನೋಡಿದೆ. ಗುಪ್ತಚರ, ವೀರ ಸೈನಿಕರು, ವಿಜ್ಞಾನಿಗಳಿಗೆ ಸೆಲ್ಯೂಟ್​. ಪರಾಕ್ರಮಿ ಸೇನೆಗೆ ನನ್ನ ಸಲಾಂ. ‘ಆಪರೇಷನ್ ಸಿಂಧೂರ’ ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ. ಪಹಲ್ಗಾಮ್ ದಾಳಿ ಕ್ರೂರತೆ ಮತ್ತು ಬರ್ಬರವಾಗಿ ನಡೆದಿತ್ತು. ಕುಟುಂಬಸ್ಥರ ಮುಂದೆಯೇ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಹೆಣ್ಣುಮಕ್ಕಳ ಸಿಂಧೂರ್ ಅಳಿಸಿದ ಉಗ್ರರಿಗೆ ಈಗ ಗೊತ್ತಾಗಿದೆ ಎಂದು ಹೇಳಿದರು.

Read More

ಚಾಲನಾ ಪರವಾನಗಿ (DL) ಕಳೆದುಕೊಂಡ ಯಾರಾದರೂ ಚಿಂತಿಸುತ್ತಾರೆ. ಆದಾಗ್ಯೂ, ಬುದ್ಧಿವಂತಿಕೆಯಿಂದ ವರ್ತಿಸಿ. ಇದು ಸಂಭವಿಸಿದಲ್ಲಿ, ನೀವು ಕೆಲವು ಪ್ರಮುಖ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸುವುದಿಲ್ಲ ಆದರೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತದೆ. ಎಫ್‌ಐಆರ್ ದಾಖಲಿಸಿ ನಿಮ್ಮ ಚಾಲನಾ ಪರವಾನಗಿ ಕಳೆದುಹೋದರೆ ಅಥವಾ ಕಳುವಾದರೆ, ಮೊದಲು ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ಚಾಲನಾ ಪರವಾನಗಿಗಾಗಿ ಎಫ್‌ಐಆರ್ ದಾಖಲಿಸಬೇಕು. ನೀವು ಅದರ ಪ್ರತಿಯನ್ನು ಸಹ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಇದು ಭವಿಷ್ಯದಲ್ಲಿ ಉಪಯುಕ್ತವಾಗುತ್ತದೆ. ಚಾಲನಾ ಪರವಾನಗಿ (DL) ಗೆ ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಮತ್ತೊಮ್ಮೆ ಡಿಎಲ್ ಪಡೆಯಲು, ನೀವು ಸರ್ಕಾರಿ ಸಾರಿಗೆ ಪೋರ್ಟಲ್‌ಗೆ ಹೋಗಬೇಕು. ಇದರ ನಂತರ ನೀವು ಚಾಲನಾ ಪರವಾನಗಿ ಸೇವೆಗಳನ್ನು ಆಯ್ಕೆ ಮಾಡಿ ಮತ್ತು ನಕಲು ಡಿಎಲ್‌ಗೆ ಅರ್ಜಿ ಸಲ್ಲಿಸಿ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ, ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ವಿವರಗಳನ್ನು ಭರ್ತಿ ಮಾಡಿ. ದಾಖಲೆಗಳನ್ನು ಸಲ್ಲಿಸಿ: ನೀವು ಆಧಾರ್ ಅಥವಾ ಪ್ಯಾನ್, ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ…

Read More

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಬಳಿಯ ಗುರುಸಿದ್ದೇಶ್ವರ ನಗರದಲ್ಲಿ ಇಬ್ಬರು ಬಾಲಕರ ನಡುವೆ ಜಗಳ ಏರ್ಪಟ್ಟಿದ್ದು, ಕೋಪಗೊಂಡ 15 ವರ್ಷದ ಬಾಲಕ, 14 ವರ್ಷದ ಚೇತನ ರಕ್ಕಸಗಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ತಡರಾತ್ರಿ ಘಟನೆ ನಡೆದಿದ್ದು, ಕಮರಿಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಬಾಲಕರು ಮೂರುಸಾವಿರ ಮಠದ ಬಳಿಯ ಜಿ ಅಡ್ಡಾ ನಿವಾಸಿಗಳು. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. https://ainkannada.com/this-fruit-has-surprised-scientists-no-matter-how-serious-the-disease-it-will-cure-it/ ಯಾವ ಕಾರಣಕ್ಕಾಗಿ ಬಾಲಕರ ನಡುವೆ ಜಗಳ ಏರ್ಪಟ್ಟಿದೆ ಎಂದು ತಿಳಿದಿಲ್ಲ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದಾಗ, 15 ವರ್ಷದ ಬಾಲಕ ಮನೆಗೆ ಹೋಗಿ ರೇಡಿಯಂ ಕಟ್ ಮಾಡುವ ಚಾಕು ತಂದು, ಚೇತನಗೆ ಇರಿದಿದ್ದಾನೆ. ತೀವ್ರ ಗಾಯಗೊಂಡ ಚೇತನನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನ‌ರ್ ಎನ್‌. ಶಶಿಕುಮಾ‌ರ್, ‘ಇಬ್ಬರು ಬಾಲಕರು ಎದುರು-ಬದುರು ಮನೆಯವರಾಗಿದ್ದು, ಜೊತೆಯಲ್ಲಿಯೇ ಆಡುತ್ತಿದ್ದರು. ಇಬ್ಬರ ನಡುವೆ ಏರ್ಪಟ್ಟ ಕ್ಷುಲ್ಲಕ ಜಗಳವು,…

Read More

ರಾಯಚೂರು:  ತೆಲುಗಿನ  ಮಹೇಶ್‌ ಬಾಬು ನಿರ್ದೇಶನದಲ್ಲಿ #RAPO22 ಚಿತ್ರದಲ್ಲಿ ಅಭಿನಯಿಸುತ್ತಿರುವ ರಿಯಲ್‌ ಸ್ಟಾರ್‌ ಉಪೇಂದ್ರ, ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ. ಮಂತ್ರಾಲಯಕ್ಕೆ ಪತ್ನಿ, ನಟಿ ತಾರಾ ಸೇರಿದಂತೆ ಕುಟುಂಬ ಸಮೇತರಾಗಿ ಆಗಮಿಸಿದ ಉಪೇಂದ್ರ, ಮೊದಲು ಮಂಚಾಲಮ್ಮ ದೇವಸ್ಥಾನಕ್ಕೆ ಭೇಟಿ ಪೂಜೆ ಸಲ್ಲಿಸಿದರು. ಬಳಿಕ ರಾಯರ‌ ಮೂಲ ಬೃಂದಾವನದ ದರ್ಶನ ಪಡೆದು ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದರು. ಸದ್ಯ ಭಾರ್ಗವ ಸಿನಿಮಾದಲ್ಲಿ ನಟಿಸುತ್ತಿರುವ ಅವರೀಗ ಮತ್ತೊಮ್ಮೆ ಟಾಲಿವುಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ಉಪ್ಪಿ ಸನ್‌ ಆಫ್‌ ಸತ್ಯಮೂರ್ತಿ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಉಪೇಂದ್ರ, ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿರುವ #RAPO22 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರ ಮಿಸ್ ಶೆಟ್ಟಿ ಮಿಸ್ಟರ್ ಪಾಲಿಶೆಟ್ಟಿ ನಿರ್ದೇಶಿಸಿದ್ದ ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ಸಿನಿಮಾಗೆ ರಿಯಲ್‌ ಸ್ಟಾರ್‌ ಎಂಟ್ರಿ ಕೊಟ್ಟಿದ್ದಾರೆ. https://ainkannada.com/kohli-bids-farewell-to-test-cricket-anushka-sharma-pens-emotional-letter/

Read More

ಬೆಂಗಳೂರು ಗ್ರಾ: 600 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವುಳ್ಳ ಹೊಸಕೋಟೆ ನಗರದ ಪ್ರಸಿದ್ಧ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಅವಿಮುಕ್ತೇಶ್ವರಸ್ವಾಮಿ  ಬ್ರಹ್ಮರಥೋತ್ಸವಕ್ಕೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದ್ದು, ಮಾಜಿ ಸಂಸದ ಬಿಎನ್ ಬಚ್ಚೇಗೌಡ ಸಾಥ್ ನೀಡಿದರು. ಚೋಳರ ಕಾಲದಿಂದಲೂ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ನಡೆದುಕೊಂಡು ಬಂದಿದೆ. ಐತಿಹಾಸಿಕ ರಥೋತ್ಸವದಲ್ಲಿ ಭಾಗಿಯಾದ ಸಾವಿರಾರು ಭಕ್ತರು, ಅವಿಮುಕ್ತೇಶ್ವರ ರಥಕ್ಕೆ ಬಾಳೆ‌ಹಣ್ಣು ಅರ್ಪಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಮಾಡಿದರು. ರಥೋತ್ಸವದಲ್ಲಿ 5 ಸಾವಿರ ಜನಕ್ಕೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. https://ainkannada.com/it-might-be-2-3-years-lets-see-what-you-can-do-to-suppress-it-nikhil-attacks-dksh/

Read More

ಭಾರತೀಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ಹೇಳಿದ ನಂತರ, ವಿರಾಟ್ ನಿವೃತ್ತಿ ತಮ್ಮ ನಿರ್ಧಾರವನ್ನು ಅನೌನ್ಸ್​​ ಮಾಡಿದ್ದು, ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳೂ ಭಾವುಕರಾಗಿದ್ದಾರೆ. ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ  ಪತ್ನಿ ಅನುಷ್ಕಾ ಶರ್ಮಾ ಪ್ರತಿಕ್ರಿಯೇ ನೀಡಿದ್ದಾರೆ. ಸೋಶೀಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಯಾವುದೇ ಕ್ರಿಕೆಟಿಗ ನಿಮ್ಮಂತೆ ಒಂದು ಮಾದರಿಯ ಕ್ರೀಡೆಯಿಂದ ನಿವೃತ್ತಿಯಾದ ಕೂಡಲೇ, ಜನರು ಆ ಸಂದರ್ಭದಲ್ಲಿ ಆತನ ಸಾಧನೆಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಆತ ನಿರ್ಮಿಸಿದ ದಾಖಲೆಗಳು, ಆತನ ವೃತ್ತಿಜೀವನದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುತ್ತಾರೆ. View this post on Instagram A post shared by AnushkaSharma1588 (@anushkasharma) ಆದರೆ, ನೀವು (ಕೊಹ್ಲಿ) ಅಂಥ ಸಾಧನೆಗಳನ್ನು ಮಾಡುವುದರ ಹಿಂದೆ ಎಷ್ಟು ಪರಿಶ್ರಮ ಪಟ್ಟಿದ್ದೀರಿ ಎಂಬುದು ನನಗೆ ಮಾತ್ರ ಗೊತ್ತು. ನೀವು ಯಾರಿಗೂ ಕಾಣಿಸದಂತೆ ಅತ್ತ ಕಣ್ಣೀರನ್ನು ನಾನು ನೋಡಿದ್ದೇನೆ. ಯಾರಿಗೂ ಕಾಣದ ಒಂದು ಅಂತರ್ಯುದ್ಧವನ್ನು…

Read More

ಮಂಡ್ಯ: ಇನ್ನು 2-3 ವರ್ಷ ಇರಬಹುದು, ನೋಡೋಣ ಏನು ಕಡಿದು ದಬ್ಬಾಕುತ್ತೀರಿ ಎಂದು ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್, ಈಗ ನೀವು ಅಧಿಕಾರದಲ್ಲಿ ಇದ್ದೀರಿ. ಕೆಲಸ ಮಾಡಿ ಜನರಿಗೆ, ನಮ್ಮ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ? ಇನ್ನು 2-3 ವರ್ಷ ಇರಬಹುದು, ನೋಡೋಣ ಏನು ಕಡಿದು ದಬ್ಬಾಕುತ್ತೀರಿ. ಜನರಿಗೆ ಸೈಟ್ ಕೊಡಲಿ, ಕೇವಲ ಮಾತಾಗಿ ಉಳಿಯುವುದು ಬೇಡ. ಕಡತಗಳಲ್ಲಿ ಮಾಡಲಿ, ಮಾತಿನಂತೆ ನಡೆದುಕೊಳ್ಳಲಿ ಎಂದರು. ಇನ್ನೂ ಜ್ಯದ ಉಪ ಮುಖ್ಯಮಂತ್ರಿಯಾಗಿ ರಾಜಕೀಯ ಹೇಳಿಕಗಳನ್ನು ನೀಡುವ ಅನಿವಾರ್ಯತೆ ಅವರಿಗಿದೆ, ಅದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ, https://ainkannada.com/this-fruit-has-surprised-scientists-no-matter-how-serious-the-disease-it-will-cure-it/ ಅದರೆ 1994 ರಿಂದ ಇಲ್ಲಿಯವರೆಗೆ ಮೂರು ದಶಕಗಳ ಅವಧಿಯಲ್ಲಿ ರಾಮನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಏನು ಕಾಣಿಕೆ ನೀಡಿದ್ದಾರೆ ಅಂತ ಜನರಿಗೆ ಗೊತ್ತಿದೆ, ಹಾಗಾಗಿ ಶಿವಕುಮಾರ್ ಅವರ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆಯಿಲ್ಲ…

Read More

ಕಲುಬುರಗಿ:  ವಿದೇಶಿ ಸಂಬಂಧವನ್ನು ಬೆಳೆಸಿಕೊಳ್ಳಲು ಬೇರೆ ದೇಶದ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಕಲುಬುರಗಿಯಲ್ಲಿ ಮಾತನಾಡಿದ ಅವರು, ವಿದೇಶಿ ಸಂಬಂಧವನ್ನು ಬೆಳೆಸಿಕೊಳ್ಳಲು ಬೇರೆ ದೇಶದ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ. ಬದಲಾಗಿ ಕುಳಿತುಕೊಂಡು ಮಾತನಾಡಿ ನಮ್ಮ ಅವರ ಸಂಬಂಧವನ್ನು ಗಟ್ಟಿಗೊಳಿಸುವುದು. ಪಾಕಿಸ್ತಾನಕ್ಕೆ ಟರ್ಕಿ ಹಾಗೂ ಚೀನಾ ಸಪೋರ್ಟ್ ಮಾಡಿದೆ. ಆದ್ರೆ ಭಾರತಕ್ಕೆ ಯಾವ ದೇಶ ಕೂಡ ಬಹಿರಂಗವಾಗಿ ಬೆಂಬಲ ನೀಡಿಲ್ಲ. ಪ್ರಧಾನಿ ಅವ್ರು ಡೊನಾಲ್ಡ್‌ ಟ್ರಂಪ್ ನಮ್ಮ ಸ್ನೇಹಿತರು ಅಂತಾ ಹೇಳ್ತಾರೆ. https://ainkannada.com/this-fruit-has-surprised-scientists-no-matter-how-serious-the-disease-it-will-cure-it/ ಆದರೆ ಕದನ ವಿರಾಮ ಆಗಿರೋ ವಿಷಯ ನಮಗೆ ಹೇಗೆ ಗೊತ್ತಾಯ್ತು ಅಂದ್ರೆ ಟ್ರಂಪ್ ಅವರ ಟ್ವೀಟ್ ಮೂಲಕ ಗೊತ್ತಾಗಿದೆ. ಆ ಟ್ವೀಟ್‌ನಲ್ಲಿ ನಮ್ಮನ್ನೂ ಪಾಕಿಸ್ತಾನವನ್ನು ಹೋಲಿಕೆ ಮಾಡಿ, ಎರಡೂ ದೇಶದವರು ಸಮಾನರು ಎಂದು ಹೇಳಿದ್ದಾರೆ. ನಾವು ಪಾಕಿಸ್ತಾನದವರಿಗಿಂತ ಮುಂದಿದ್ದೇವೆ. ಟ್ರಂಪ್ ಅವ್ರು ನಮಗೆ ಸಾಮಾನ್ಯ ಪ್ರಜ್ಞೆ ಹೇಳಿ ಕೊಡ್ತಿದ್ದಾರಾ ಎಂದು ಗುಡುಗಿದರು.  

Read More

ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಇಂದು ಬೆಳಿಗ್ಗೆ ಎಸ್ಪಿ ಡಾ.ಶೋಭಾರಾಣಿ ಅವರು ರೌಡಿಶೀಟರ್ ಗಳ ಪರೇಡ್ ನಡೆಸಿದ್ದರು. ಜಿಲ್ಲೆಯ ಒಟ್ಟು 17 ಪೋಲಿಸ್ ಠಾಣೆಗಳ ವ್ಯಾಪ್ತಿಯ 400 ಕ್ಕೂ ಹೆಚ್ಚು ರೌಡಿ ಶೀಟರ್ ಗಳು ಈ ಪರೇಡ್ ನಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ. ನಗರದ ಕೌಲ್ ಬಜಾರ್, ಗಾಧಿನಗರ, ಬ್ರೂಸ್ ಪೇಟೆ, ಎಪಿಎಂಸಿ, ಬಳ್ಳಾರಿ ಗ್ರಾಮೀಣ, ಕುರುಗೋಡು ಪೋಲಿಸ್ ಠಾಣೆ ಸೇರಿದಂತೆ ಜಿಲ್ಲೆಯ 17 ಪೋಲಿಸ್ ಠಾಣೆಯ ರೌಡಿಶೀಟರ್ ಗಳಿಗೆ ಎಸ್ಪಿ ಡಾ.ಶೋಭಾರಾಣಿಯವರು ಕ್ಲಾಸ್ ತೆಗೆದುಕೊಂಡರು. ಜಿಲ್ಲೆಯ 400 ಕ್ಕೂ ಹೆಚ್ಚು ರೌಡಿ ಶೀಟರ್ ಗಳ ಪೈಕಿ 67 ಜನ ಆ್ಯಕ್ಟಿವ್ ರೌಡಿಗಳಿದ್ದಾರೆಂದು ತಿಳಿದು ಬಂದಿದೆ. https://ainkannada.com/this-fruit-has-surprised-scientists-no-matter-how-serious-the-disease-it-will-cure-it/ ಇನ್ನು ರೌಡಿಶೀಟರ್ ಗಳಿಗೆ ಕ್ಲಾಸ್ ತೆಗೆದುಕೊಂಡ ಎಸ್ಟಿ ಡಾ.ಶೋಭಾರಾಣಿಯವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಯಾಗದಂತೆ ಸೂಚಿಸಿದರಲ್ಲದೇ, ರೌಡಿಗಳ ವೃತ್ತಿಯನ್ನು ವಿಚಾರಿಸಿದ ಎಸ್ಪಿಯವರು ಇನ್ನು ಮುಂದೆ ಕ್ರೈಂ ನಲ್ಲಿ ಯಾರು ಸಹ ಭಾಗಿಯಾಗಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.

Read More

ಗದಗ: ಪಂಚಮಸಾಲಿ ಸಮಾಜದ ಯುವಕ, ಎಬಿವಿಪಿ ಕಾರ್ಯಕರ್ತರ ರವಿ ನರೇಗಲ್ ಮೇಲೆ ಬಾಗಲಕೋಟೆ ಜಿಲ್ಲೆ ಬದಾಮಿ ಪೊಲೀಸ್ ಠಾಣೆಯ ಪಿಎಸ್ಐ ವಿಜಯಕುಮಾರ ರಾಥೋಡ್,  ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಪಿಎಸ್‌ ಐ ಅಮಾನತು ಮಾಡುವಂತೆ ಒತ್ತಾಯಿಸಿ ಗದಗ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು. ರವಿ ನರೇಗಲ್ ಬದಾಮಿ ಪಟ್ಟಣದ ರಾಮದುರ್ಗ ಸರ್ಕಲ್ ನಲ್ಲಿ ಚಹಾ ಕುಡಿಯುವ ವೇಳೆ ರಾತ್ರಿ 11ಕ್ಕೆ ಅಂಗಡಿ ಬಂದ್ ಮಾಡುವಂತೆ ಬಂದಿದ್ದ ಪಿಎಸ್ಐ, ಈ ವೇಳೆ ರವಿಗೆ ರಾಬರಿ ಮಾಡಿದ್ದೀಯಾ ಎಂದು ಬೈದಿದ್ದಾರಂತೆ.  ದೇವಸ್ಥಾನಕ್ಕೆ ಬಂದಿದ್ದೇನೆ, ಬಿಡಿ ಎಂದರೂ ಬಿಡದೇ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಗೆ ಕರೆದೊಯ್ದು ಹಿವ್ಗಾಮುಗ್ಗ ಥಳಿಸಿದ್ದಾರೆ ಎಂದು ಗದಗ ಜಿಲ್ಲಾ ವೀರರಾಣಿ ಕಿತ್ತೂರು ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಆರೋಪಿಸಿದೆ. https://ainkannada.com/bjp-has-no-respect-they-lie-you-believe-them-why-is-the-cm-angry/ ಬದಾಮಿ ಪಿಎಸ್ಐ ವಿಜಯಕುಮಾರ ರಾಥೋಡ್ ಅಮಾನತು ಮಾಡುವಂತೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಮೂಲಕ ಪೊಲೀಸ್ ಮಹಾನಿರ್ದೆಶಕರಿಗೆ ಮನವಿ ಸಲ್ಲಿಸಲಾಯಿತು.

Read More