ಬೆಂಗಳೂರು:- ನಗರದ ಅತಿ ದೊಡ್ಡ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ 7ನೇ ಚಿನ್ನದ ಮಳಿಗೆಯನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಾಳೆ ಅಂದ್ರೆ ಏಪ್ರಿಲ್ 10ರ ಗುರುವಾರ ಉದ್ಘಾಟನೆಗೊಳ್ಳಲಿದೆ. https://ainkannada.com/dont-go-to-kanakapur-nelamangala-airpot-near-shira-cong-mlas-letter-to-cm/ ಈ ಬಗ್ಗೆ ಪರಿಷತ್ ಶಾಸಕ ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್ ಎಂಡಿ TA ಶರವಣ ಮಾತನಾಡಿ, ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ನ 7ನೇ ಮಳಿಗೆ ಮಲ್ಲೇಶ್ವರದಲ್ಲಿ ಏಪ್ರಿಲ್ 10ರ ಗುರುವಾರ ಪ್ರಾರಂಭಗೊಳ್ಳಲಿದೆ. ಶ್ರೀ ವಿನಯ್ ಗುರೂಜಿ ಸಾನ್ನಿಧ್ಯ ಇರಲಿದ್ದು, ನಟ ಸುದೀಪ್ ಅವರು ಸ್ಟೋರ್ ಅನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಡೈಮಂಡ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಡಿಸಿಎಂ, ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಎಡಿಜಿಪಿ ವಿರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಆರ್.ಪಿ.ರವಿಶಂಕರ್, ಸತ್ಯನಾರಾಯಣ, ನಟಿ ಪ್ರೇಮಾ, ಗಾಯಕ ಚಂದನ್ ಶೆಟ್ಟಿ, ಅನುಷಾ ರೈ, ಐಶ್ವರ್ಯಾ ಸಿಂಧೋಗಿ,…
Author: AIN Author
ಬೆಂಗಳೂರು :- ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರವಾಗಿ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/police-constable-robbed-at-home-gold-jewellery-stolen-then-fled/ ಈ ಸಂಬಂಧ ಮಾತನಾಡಿದ ಅವರು, ಅವರೇನೋ ಆರಂಭ ಶೂರತ್ವ ಮಾಡಿದರು. ನಿನ್ನೆಯಿಂದ ಧ್ವನಿ ಕಡಿಮೆ ಆದಂಗಿದೆ. ಅವರದ್ದೇ ಸರ್ಕಾರ ಬೆಲೆ ಏರಿಕೆ ಮಾಡಿದೆ. ನ್ಯಾಚುರಲ್ ಪಾರ್ಟಿಯಾಗಿ ಯಾವ ರೀತಿ ವರ್ತನೆ ಮಾಡಬೇಕಿತ್ತು. ಪ್ರತಿಭಟನೆ ಮಾಡಲು ಬಿಜೆಪಿ ಅವರಿಗೆ ನೈತಿಕತೆ ಇಲ್ಲ. ಟ್ರಂಪ್ ಹೊಡೆದ ಅಷ್ಟು ಸುಲಭವಾಗಿಲ್ಲ. ಪ್ರತಿಭಟನೆ ಬಿಟ್ಟು ವಾಪಸ್ ಬನ್ನಿ. ಟಮೊಟೋ, ಬೆಳ್ಳುಳ್ಳಿ ದರ ಒಂದು ಎರಡು ರೂಪಾಯಿ ಆಗಿದೆ. ಕೃಷಿಗೆ ಆದ್ಯತೆ ಕೊಡಬೇಕು ಅದಕ್ಕೆ ಕಾರ್ಗೋ ಎಕ್ಸಪರ್ಟ್ ಮುಖ್ಯ ಎಂದರು. ತಾವು ಸಚಿವ ಸ್ಥಾನ ಆಕಾಂಕ್ಷಿಯ ಎಂಬ ವಿಚಾರವಾಗಿ ಮಾತನಾಡಿ, ನಾನು ಒಂದೇ ಪಾರ್ಟಿ, ಒಂದೇ ಕ್ಷೇತ್ರ. ೧೦ ಬಾರಿ ಚುನಾವಣೆ ಎದುರಿಸಿದ್ದೇನೆ. ನಾನು ಪಕ್ಷಕ್ಕೆ ವಿಧೇಯನಾಗಿ ಇದ್ದೇನೆ. ನನ್ನೇನು ಸುಮ್ಮನೆ ಕೂರಿಸಿಲ್ಲ ದೆಹಲಿ ಪ್ರತಿನಿಧಿ ಮಾಡಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿ ಏನು ಬೇಕಾದ್ರೂ ಆಗಬಹುದು. ಸರ್ಕಾರಕ್ಕೆ ಎರಡು…
ಚಾಮರಾಜನಗರ : ಜಿಲ್ಲೆಯ ಹನೂರು ಪಟ್ಟಣದ 11ನೇ ವಾರ್ಡ್ ನ ವಿನಾಯಕ ನಗರದಲ್ಲಿ ಪೊಲೀಸ್ ಪೇದೆಯೋರ್ವನ ಮನೆಯ ಬಾಗಿಲು ಬೀಗ ಒಡೆದ ಕಳ್ಳರು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಜೀಪ್ ಚಾಲಕ ಪರಮೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಪರಮೇಶ್ ತಮ್ಮ ಮಕ್ಕಳಿಗೆ ಬೇಸಿಗೆ ರಜೆ ಇದೆ ಎಂದು ತಮ್ಮ ಸ್ವಗ್ರಾಮಕ್ಕೆ ಕುಟುಂಬ ಸಮೇತ ತೆರಳಿ ಮಕ್ಕಳ ಪರೀಕ್ಷೆ ಫಲಿತಾಂಶದ ಮಾಹಿತಿ ಪಡೆಯಲು ವಾಪಸ್ಸು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. https://ainkannada.com/door-to-door-robbery-jewellery-cash-stolen/ ಮನೆಗೆ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಸುಮಾರು 16ಗ್ರಾಂ ಚಿನ್ನಾಭರಣ ಬೆಳ್ಳಿ ಪದಾರ್ಥ ಮತ್ತು ಸುಮಾರು 5ಸಾವಿರ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೆಯ ಮಾಲೀಕ ಪರಮೇಶ್ ಹನೂರು ಪೊಲೀಸರಿಗೆ ದೂರನ್ನು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉಡುಪಿ : ನಾನೊಬ್ಬ ಕಾರ್ಯಕರ್ತ, ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಈ ವೇಳೆ ನಾವೆಲ್ಲ ರಾಷ್ಟ್ರೀಯ ಪಕ್ಷದ ಸದಸ್ಯರು. ನಾನೊಬ್ಬ ಕಾರ್ಯಕರ್ತ ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿತ್ತು. ಇನ್ನೊಂದು ಜವಾಬ್ದಾರಿ ಕೊಟ್ಟರು, ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾಡುವುದು ಮಾತ್ರ ನನ್ನ ಕರ್ಮ, ಏನೇ ಅವಕಾಶಕೊಟ್ಟರು ಕೆಲಸ ಮಾಡುತ್ತೇನೆ. ಚುನಾವಣೆ ಬರುತ್ತಿದೆ. ಹೀಗಾಗಿ, ಗೃಹ ಮಂತ್ರಿಯವರನ್ನು ತಮಿಳುನಾಡು ವಿಪಕ್ಷ ನಾಯಕ ಪಳನಿ ಸ್ವಾಮಿ ಭೇಟಿಯಾಗಿದ್ದಾರೆ. ಗೃಹ ಸಚಿವರು ಮೈತ್ರಿಯ ಬಗ್ಗೆ ಮಾತನಾಡಿದ್ದಾರೆ. ಎಐಡಿಎಂ ಕೆ ಕುರಿತ ನನ್ನ ನಿಲುವು ಎಲ್ಲರಿಗೂ ಗೊತ್ತು ಎಂದರು. ನಾನು ಎಲ್ಲಿ ಇರಬೇಕು ಯಾವ ಪೊಸಿಷನ್ನಲ್ಲಿ ಇರಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂದು ಪಕ್ಷಕ್ಕೆ ಗೊತ್ತಿದೆ ಎಂದರು. https://ainkannada.com/congress-leader-p-chidambaram-collapses-during-aicc-session/ ತಮಿಳುನಾಡು ಒಂದು ಸುದೀರ್ಘ ಕಾಲದ ಆಟ,…
ರಾಯಚೂರು : ಸಿಂಧನೂರು ಸುಕಲಪೇಟೆಯ ಐವರ ಕೊಲೆ ಪ್ರಕರಣ ಸಂಬಂಧ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ, 9 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸಿಂಧನೂರು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಆದೇಶ ಹೊರಡಿಸಿದ್ದಾರೆ. https://ainkannada.com/officer-falls-into-lokayukta-trap-on-the-very-day-he-was-to-be-re-elected/ ಘಟನೆ ವಿವರ..? ಮೌನೇಶ್ ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಇದೇ ವಿಚಾರಕ್ಕೆ ಮೌನೇಶ್ ತಂದೆ ಈರಪ್ಪ ಮತ್ತು ಮಂಜುಳಾ ತಂದೆ ಸಣ್ಣ ಫಕೀರಪ್ಪ ನಡುವೆ ಜಗಳ ನಡೆದಿತ್ತು. 2020ರ ಜುಲೈ 11ರಂದು ಮೌನೇಶ್ ತಂದೆ ಈರಪ್ಪ, ತಾಯಿ ಸುಮಿತ್ರಮ್ಮ, ಅಣ್ಣ ನಾಗರಾಜ್, ಹನುಮೇಶ್, ಸಹೋದರಿ ಶ್ರೀದೇವಿ ಕೊಲೆಯಾಗಿತ್ತು. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತೀರ್ಪು ಇಂದು ಪ್ರಕಟಗೊಂಡಿದೆ. ಎ-1 ಆರೋಪಿ ಸಣ್ಣ ಫಕೀರಪ್ಪ, ಎ- 2 ಅಂಬಣ್ಣ, ಎ-3 ಸೋಮಶೇಖರ್ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಎ- 4 ರೇಖಾ, ಎ-5 ಗಂಗಮ್ಮ,…
ಬೆಂಗಳೂರು:- ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಗ್ಯಾರಂಟಿ ಟೀಕಿಸುವ ಭರದಲ್ಲಿ ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. https://ainkannada.com/officer-falls-into-lokayukta-trap-on-the-very-day-he-was-to-be-re-elected/ ನಗರದ ಪಕ್ಷದ ಕಚೇರಿಯಲ್ಲಿ ಮಾತನಾಡಿದ ನಿಖಿಲ್, ಗ್ಯಾರಂಟಿ ಯಿಂದ ಹಿಮಾಚಲ ಪ್ರದೇಶ ದಿವಾಳಿಯಾಗಿದೆ. ತೆಲಂಗಾಣದಲ್ಲಿ ಸಿಎಂ ಎಷ್ಟು ಸಾಲ ಆಗಿದೆ ಅಂತ ಗೊತ್ತಾಗಿಲ. ಗ್ಯಾರಂಟಿಗಳಿಂದ ಸಾಲ ಆಗಿದೆ. ಮುಂದೆ ಎಲ್ಲಿ ದಿವಾಳಿ ಆಗುತ್ತೆ ಅಂತ ಅಲ್ಲಿನ ಸಿಎಂ ಹೇಳಿದ್ದಾರೆ.ಗ್ಯಾರಂಟಿ ಘೋಷಣೆ ಮಾಡುವ ಮುನ್ನ ನಮ್ಮ ಆರ್ಥಿಕ ಪರಿಸ್ಥಿತಿ ಅವಲೋಕಿದೆ ತೀರ್ಮಾನ ಮಾಡಿದ್ದಾರೆ.ನಾವು ಗ್ಯಾರಂಟಿ ಯೋಜನೆ ನಮ್ಮ ವಿರೋಧ ಇಲ್ಲ. ಅದರೆ ನೀವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ? ಆಡಳಿತ ಪಕ್ಷ ಶಾಸಕರು,ಅನುಭವಿ ಶಾಸಕರು ಇದ್ದಾರೆ. ಆಡಳಿತ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ ಸಂದರ್ಭದಲ್ಲಿ ಅವ್ರ ಪರಿಸ್ಥಿತಿ ನಿಮಗೆ ತಿಳಿಯುತ್ತೆ. ರಾಜ್ಯದಲ್ಲಿ ಅಭಿವೃದ್ಧಿ ಕಾಣದಂತೆ ನೋಡಬಹುದು.ಇತ್ತೀಚೆಗೆ ೧೦ ಕೋಟಿ ನೀಡಿದ್ದಾರೆ. ಆ ೧೦ ಕೋಟಿಯಲ್ಲಿ ಎಷ್ಟು ರಸ್ತೆ ಅಭಿವೃದ್ಧಿ ಮಾಡೋಕೆ ಆಗುತ್ತೆ. ಇದು ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಗೆ…
ಅಹಮದಾಬಾದ್: ಮಾಜಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ತೀವ್ರ ಅಸ್ವಸ್ಥಗೊಂಡು, ಕುಸಿದುಬಿದಿದ್ದಾರೆ. ಗುಜರಾತ್ನ ಅಹಮದಾಬಾದ್ನಲ್ಲಿ ನಡೆಯುತ್ತಿರುವ ಎಐಸಿಸಿ ರಾಷ್ಟ್ರೀಯ ಅಧಿವೇಶನದಲ್ಲಿ ಘಟನೆ ನಡೆದಿದೆ. ಸಬರಮತಿ ಆಶ್ರಮದಲ್ಲಿ 89ನೇ ಮಹಾ ಕಾಂಗ್ರೆಸ್ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಭಾಗವಹಿಸಿದ್ದ ಪಿ.ಚಿದಂಬರಂ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಬಿಸಿಲಿನ ಬೇಗೆಯಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಚಿದಂಬರಂ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. https://ainkannada.com/photo-session-of-aicc-working-meeting-in-gujarat/ ಇನ್ನೂ ಚಿದಂಬರಂ ಅವರ ಪುತ್ರ ಮತ್ತು ಸಂಸದ ಕಾರ್ತಿ ಚಿದಂಬರಂ ಅವರು ಈ ಕುರಿತು ಎಕ್ಸ್ ಖಾತೆಯಲ್ಲಿ , ‘ನನ್ನ ತಂದೆ ಚಿದಂಬರಂ ಅವರು ಅಹಮದಾಬಾದ್ನಲ್ಲಿ ತೀವ್ರ ಬಿಸಿಲಿನಿಂದ ಮತ್ತು ನಿರ್ಜಲೀಕರಣದಿಂದಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಜೈಡಸ್ ಆಸ್ಪತ್ರೆ ದಾಖಲಿಸಲಾಗಿದೆ. ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ವೈದ್ಯರು ಆರೋಗ್ಯ ಪರಿಶೀಲಿಸುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ
ಶಿವಮೊಗ್ಗ: ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಂದು ತನ್ನ ವೃತ್ತಿಯ ಕೊನೆಯ ದಿನವಾಗಿದ್ದು, ಇಂದೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪ ಅವರಿಗೆ ಇಂಧು ವೃತ್ತಿಯ ಕೊನೆಯ ದಿನವಾಗಿತ್ತು. ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. ಆದರೆ ಲಂಚದ ಆಸೆಯಿಂದ ಕೊನೆಯ ದಿನ ಅರೆಸ್ಟ್ ಆಗಿದ್ದಾರೆ. https://ainkannada.com/tor-darshan-is-expected-to-attend-the-premiere-screening-of-dhanveers-vaamana-movie-at-gt-world-mall-today/ ಶಿವಮೊಗ್ಗ ನಗರದಲ್ಲಿ ಟಿವಿ, ಎಲ್ಇಡಿ ಪರದೆ ಅಳವಡಿಸುವ ಸಂಬಂಧ ಬಿಲ್ ಮಾಡಲು ಮುಂಬೈ ಮೂಲದ ಕಂಪೆನಿ ಬಳಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಹಣ ಕೊಡದೇ ಇದ್ದರೆ, ಮುಂಬೈ ಮೂಲದ ಕಂಪೆನಿ ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂದು ಷರಾ ಬರೆಯುವುದಾಗಿ ಅವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಬೆಂಗಳೂರು:- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ಗೆ ಇಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಇಡಿ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆದೇಶ ಕಾಯ್ದಿರಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಟೆನ್ಷನ್ ನಲ್ಲೇ ಕಾಲ ಕಳೆಯುವಂತಾಗಿದೆ. https://ainkannada.com/mumbai-terror-attack-accused-rana-to-be-extradited-to-india-soon/ ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ಹಾಗೂ ಲೋಕಾಯುಕ್ತ ಪೊಲೀಸರ ಪರ ವಕೀಲ ವೆಂಕಟೇಶ್ ಅರಬಟ್ಟಿ ಅವರ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ. ಇದರಿಂದ ಸಿಎಂ ಸಿದ್ದರಾಮಯ್ಯಗೆ ತೀರ್ಪು ಏನಾಗಲಿದೆಯೋ ಏನೋ ಎಂದು ಢವಢವ ಶುರುವಾಗಿದೆ. ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ವಾದ ಮಾಡಿದ್ದು, ಪಿಎಂಎಲ್ ಎ ಕಾಯ್ದೆಯ 66(2) ಅಡಿ ಇಡಿ ಶಾಸನಬದ್ದ ಮಾಹಿತಿದಾರ. ವಿಜಯ್ ಮದನ್ ಲಾಲ್ ಚೌಧರಿ ಕೇಸ್ ನಲ್ಲಿ ಇಡಿ ಅಧಿಕಾರ ಸ್ಪಷ್ಟಪಡಿಸಲಾಗಿದೆ. 2022 ರಲ್ಲಿಯೂ ಮಾರ್ಟಿನ್ ತೀರ್ಪು, ನಾಗರಾಜ್ ತೀರ್ಪುಗಳಿವೆ.. ಇಡಿ ಅಧಿಕಾರ ಸಮರ್ಥಿಸುವ ತೀರ್ಪನ್ನು ಸುಪ್ರೀಂ…
ಮನುಷ್ಯನಿಗೆ ಕಾಯಿಲೆಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ ಎನ್ನುವ ಮಾತಿದೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ, ಕೆಲವೊಂದು ಕಾಯಿಲೆಯ ರೋಗಲಕ್ಷಣಗಳು ನಮ್ಮ ದೇಹವನ್ನು ಸೇರಿಕೊಂಡು, ಏನಾದರೂ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದಾಗ ಬಳಿಕವಷ್ಟೇ ನಮಗೆ ಆ ಕಾಯಿಲೆಯ ಬಗ್ಗೆ ತಿಳಿಯು ವುದು. ಆದರೆ ಹೆಚ್ಚಿನವರು ಇಂತಹ ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸುತ್ತಾರೆ ಅಥವಾ ಯಾವು ದೋ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಇರಬಹುದೇನೋ ಎಂದು ಸಮ್ಮನಿರುವುದರಿಂದ, ಮುಂದಿನ ದಿನಗಳಲ್ಲಿ ದೊಡ್ಡ ರೀತಿಯ ಆರೋಗ್ಯಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇರತ್ತದೆ. ಅದರಲ್ಲಿ ಕಿಡ್ನಿ ಸ್ಟೋನ್ ಕೂಡ ಒಂದು. ಇದನ್ನು ತಡೆಯಲು ಹೀಗೆ ಮಾಡಿ. https://ainkannada.com/congresss-statement-on-gas-fuel-price-hike-is-half-truth-by-vijayendra/ ಬೇವಿನ ಮರ ನಮ್ಮ ಜೀವನದ ಒಂದು ಭಾಗವಾಗಿದೆ. ನಾವು ಹಲವು ದಿನಗಳಿಂದ ಹಲ್ಲುಜ್ಜಲು ಬೇವಿನ ಪುಡಿ, ಯುಗಾದಿ ಚಟ್ನಿಯಲ್ಲಿ ಬೇವಿನ ಹೂವು ಮತ್ತು ಜ್ವರ ಕಡಿಮೆ ಮಾಡಲು ಬೇವಿನ ಎಲೆಗಳನ್ನು ಬಳಸುತ್ತಿದ್ದೇವೆ. ವಾಸ್ತವವಾಗಿ, ಬೇವು ಒಂದು ಔಷಧೀಯ ಮರವಾಗಿದ್ದು ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಮರದ ಬೇವಿನ…