ನವದೆಹಲಿ: 26/11 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹಾವೂರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸುವ ನಿರೀಕ್ಷೆ ಇದೆ. ಯುಎಸ್ನಿಂದ ಭಾರತಕ್ಕೆ ರಾಣಾ ಹಸ್ತಾಂತರ ಪ್ರಕ್ರಿಯೆಯು ನಡೆಯುತ್ತಿದೆ ಎಂದು ತಿಳಿದುಬಂದಿದೆ. ಗಡಿಪಾರು ತಪ್ಪಿಸಿಕೊಳ್ಳಲು ಯುಎಸ್ ಸುಪ್ರೀಂ ಕೋರ್ಟ್ ಗೆ ರಾಣಾ ಕೊನೆಯ ಪ್ರಯತ್ನವಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳು ಅವರ ಅರ್ಜಿಯನ್ನು ನಿರಾಕರಿಸಿದ್ದಾರೆ. ಈ ಮೂಲಕ ಭಾರತಕ್ಕೆ ಹಸ್ತಾಂತರದಿಂದ ತಪ್ಪಿಸಿಕೊಳ್ಳುವ ರಾಣಾ ಕೊನೆಯ ಪ್ರಯತ್ನ ವಿಫಲವಾಗಿದೆ. ಇದಾದ ಕೆಲವೇ ದಿನಗಳಲ್ಲಿ ಹಸ್ತಾಂತರ ಪ್ರಕ್ರಿಯೆಯ ಅತ್ಯಂತ ಮಹತ್ವದ ಬೆಳವಣಿಗೆ ಸಂಭವಿಸಿದೆ. ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್ನಲ್ಲಿರುವ 64 ವರ್ಷದ ರಾಣಾ, ಫೆಬ್ರವರಿ 27, 2025 ರಂದು ಯುನೈಟೆಡ್ ಸ್ಟೇಟ್ಸ್ನ ಸುಪ್ರೀಂ ಕೋರ್ಟ್ನ ಅಸೋಸಿಯೇಟ್ ನ್ಯಾಯಮೂರ್ತಿ ಮತ್ತು ಒಂಬತ್ತನೇ ಸರ್ಕ್ಯೂಟ್ನ ಸರ್ಕ್ಯೂಟ್ ನ್ಯಾಯಮೂರ್ತಿ ಎಲೆನಾ ಕಗನ್ ಅವರಿಗೆ ‘ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಾಗಿ ತಡೆಯಾಜ್ಞೆ ಬಾಕಿ ಇರುವ ಮೊಕದ್ದಮೆಗಾಗಿ ತುರ್ತು ಅರ್ಜಿ’ಯನ್ನು ಸಲ್ಲಿಸಿದ್ದರು. https://ainkannada.com/maoist-killed-in-encounter-with-security-forces/ ಕಗನ್ ಕಳೆದ ತಿಂಗಳ ಆರಂಭದಲ್ಲಿ ಅರ್ಜಿಯನ್ನು ನಿರಾಕರಿಸಿದ್ದರು.…
Author: AIN Author
ಹಾಸನ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಮುಂದುವರೆದಿದೆ. ಜನಾಕ್ರೋಶ ಯಾತ್ರೆಗೆ ಎಲ್ಲಾ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಸಿಗುತ್ತಿದೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ಹೊಂದಿದ್ದಾರೆ. ತಾಳ್ಮೆಯ ಕಟ್ಟೆ ಒಡೆಯುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಬೆಲೆ ಏರಿಕೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ರಾಯರೆಡ್ಡಿ ಅವರೇ ಹೇಳಿದ್ದಾರೆ ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್ ಅಂಥ. ಈ ಸರ್ಟಿಫಿಕೇಟ್ ನಾನ್ ಕೊಡುತ್ತಾ ಇಲ್ಲಾ. ಸಿಎಂ ಅವರ ಅರ್ಥಿಕ ಸಲಹೆಗಾರರೇ ಮಾಹಿತಿ ನೀಡಿದ್ದಾರೆ https://ainkannada.com/do-you-know-what-minister-ramalinga-reddy-said-about-rayareddys-statement-that-he-is-number-one-in-corruption/ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸಲ್ ಬೆಲೆ ಏರಿಸಿದ್ದಾರೆ. ಇದಕ್ಕೆ ಕಾರಣ ಕಚ್ಚಾತೈಲ ಬೆಲೆ ಏರಿಕೆ. ಆದರೆ ಇದರ ಹೊರೆ ಜನರ ಮೇಲೆ ಹಾಕಿಲ್ಲ. ಗ್ಯಾಸ್ ಮೇಲೆ 50 ರೂ ಏರಿಕೆ ಮಾಡಿದ್ದಾರೆ. ಆದರೆ ಗ್ಯಾಸ್ ಬೆಲೆ ಕಡಿಮೆ ಮಾಡಿದ್ದರು ಈಗ ಸ್ವಲ್ಪ ಪ್ರಮಾಣದ ಬೆಲೆ ಏರಿಕೆ…
ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ ಯಾದಗಿರಿಯ ಮಾಧ್ವಾರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅಧ್ಯಕ್ಷರ ಬದಲಾವಣೆ ಬಗ್ಗೆ ಪಬ್ಲಿಕ್ ನಲ್ಲಿ ಮಾತಾಡೋದಿಲ್ಲಎಂದಿದ್ದಾರೆ. ಬಹಳ ಸ್ಪಷ್ಟವಾಗಿ ಆ ರೀತಿ ಮಾತಾಡಬಾರದು ಅಂತ ಹೈಕಮಾಂಡ್ ಹೇಳಿದೆ ಯಾರ್ಯಾರು ಮಾತಾಡ್ತಾರೆ ಅವರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ನಾನು ಯಾವತ್ತೂ ಮಾತಾಡೋದಿಲ್ಲ ಖರ್ಗೆಯವರು ಬಂದಾಗ ನೀವು ಎಐಸಿಸಿ ಅಧ್ಯಕ್ಷರು ನೀವೇ ಜವಾಬ್ದಾರರು ಅಂತ ಕೇಳಿ ಎಂದರು. https://ainkannada.com/corruption-is-also-present-in-the-congress-government-basavaraja-rayareddy-admits/ ಕರ್ನಾಟಕ ನಂಬರ್ ಒನ್ ಭ್ರಷ್ಟ ರಾಜ್ಯ ಎಂಬ ಶಾಸಕ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದ ಪರಿಸ್ಥಿತಿ ಅವರು ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಸುಧಾರಣೆ ಆಗುತ್ತಿದೆ. ಭ್ರಷ್ಟಾಚಾರ ಕಡಿಮೆ ಆಗುತ್ತಿದೆ., ಇನ್ನು 3 ವರ್ಷದಲ್ಲಿ ಸಂಪೂರ್ಣ ಕಡಿಮೆ ಆಗುತ್ತೆ. ಬಿಜೆಪಿ ಇದ್ದಾಗ ನೂರಕ್ಕೆ ನೂರು ಭಾಗ ಭ್ರಷ್ಟಾಚಾರ ದೇಶದಲ್ಲಿ ಜಾಸ್ತಿ ಇತ್ತು ಅಂತ ಹೇಳಿದ್ದಾರೆ. ಆದರೆ ನಮ್ಮ ಅವಧಿಯಲ್ಲಿ ನಡೆದಿರುವದಲ್ಲ ಎಂದರು. …
ಬೆಂಗಳೂರು:- ಗ್ಯಾಸ್ ಬೆಲೆ 50 ರೂ. ಹೆಚ್ಚಳಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/kangana-ranaut-stunned-by-%e2%82%b91-lakh-electricity-bill-for-manali-home/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಎಷ್ಟು ಇತ್ತು ಎಂದು ಕಾಂಗ್ರೆಸ್ ಸ್ನೇಹಿತರು ಮೊದಲು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು. 2004ರಿಂದ 2014ರವರೆಗೆ ಕಾಂಗ್ರೆಸ್ನ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತದೆ. ಯುಪಿಎ ಅಧಿಕಾರದಲ್ಲಿದ್ದಾಗ ಒಂದು ಎಲ್ಪಿಜಿ ಸಿಲಿಂಡರ್ನ ಬೆಲೆ 1,241 ರೂ. ಇತ್ತು. ಈಗ ನರೇಂದ್ರ ಮೋದಿ ಸರ್ಕಾರದಲ್ಲಿ 854 ರೂ. ಇದೆ. 50 ರೂ. ಜಾಸ್ತಿ ಮಾಡಿದ ಮೇಲೆಯೂ ಗ್ಯಾಸ್ ಬೆಲೆ 850 ರೂ. ಮಾತ್ರ ಇದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು. ಇನ್ನೂ ಕಾಂಗ್ರೆಸ್ ಅಪಪ್ರಚಾರಗಳು,ಬಿಜೆಪಿ ಜೆಡಿಎಸ್ ಏನೂ…
ಉತ್ತರಕನ್ನಡ : ದಾಂಡೇಲಿಯ ಗಾಂಧಿನಗರದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ 500 ರೂಪಾಯಿಗಳ ನಕಲಿ ನೋಟುಗಳು ಮುದ್ರಣದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಂಡೇಲಿ ನಗರ ಪೊಲೀಸರು ದಾಳಿ ನಡೆಸಿ, ನಕಲಿ ನೋಟುಗಳು ಮತ್ತು ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡರು. ಗೋವಾ ಮೂಲದವರಾದ ಅರ್ಷದ್ ಖಾನ್, ನೂರ್ಜನ್ ಜುಂಜುವಾಡ್ಕರ್ ಅವರಿಗೆ ಸೇರಿದ ಗಾಂಧಿನಗರದ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ. ಆದರೆ ಒಂದು ತಿಂಗಳಿನಿಂದ ಮನೆಗೂ ಬಾರದೇ, ಮನೆಯ ಹಿಂಬಾಗಿಲಿಗೆ ಸರಿಯಾಗಿ ಬೀಗ ಹಾಕಿಲ್ಲ ಎಂಬುದನ್ನು ಗಮನಿಸಿದ ನಂತರ ಜುಂಜುವಾಡ್ಕರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://ainkannada.com/violation-of-rules-in-bandipur-tiger-reserve-did-the-forest-minister-give-permission/ ಈ ವೇಳೆ “ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ” ಎಂದು ಬರೆದಿದ್ದ ಮತ್ತು ರಾಜ್ಯಪಾಲರ ಸಹಿ ಇಲ್ಲದ 500 ರೂಪಾಯಿ ನೋಟುಗಳ ಬಂಡಲ್ ಕಂಡುಬಂದಿದೆ. ಸದ್ಯ ಈ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡರು. ಈ ನಕಲಿ ನೋಟಿನ ಮುದ್ರಣಕ್ಕೆ ಸಂಬಂಧಿಸಿದಂತೆ ಮನೆಯ ಬಾಡಿಗೆದಾರನಾಗಿದ್ದ ಅರ್ಷದ್ ಖಾನ್ನನ್ನು ಬಂಧಿಸಲು…
ಬೆಂಗಳೂರು:- ಮುಡಾ ಹಗರಣ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 500 ಕೋಟಿ ಕಿಕ್ಬ್ಯಾಕ್ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ. https://ainkannada.com/anchor-anushree-revealed-her-wedding-plan/ ಈ ಮೂಲಕ ಮುಡಾ ಹಗರಣದಲ್ಲಿ ಇನ್ನೂ ಜಾರಿ ನಿರ್ದೇಶನಾಲಯದ ತೂಗುಗತ್ತಿಯಿಂದ ಪಾರಾಗದ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ತಲೆನೋವು ಶುರುವಾಗಿದೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಣಿ ಗುತ್ತಿಗೆ ನವೀಕರಣ ಹೆಸರಲ್ಲಿ 500 ಕೋಟಿ ರೂ. ಕಿಕ್ಬ್ಯಾಕ್ ಪಡೆದ ಆರೋಪ ಅವರ ವಿರುದ್ಧ ಕೇಳಿಬಂದಿದ್ದು, ಈ ವಿಚಾರವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹೊಸ ಆರೋಪ ಏನು? ಸಿದ್ದರಾಮಯ್ಯ ಅವರು 2015ರಲ್ಲಿ ಅಂದ್ರೆ ಬರೋಬ್ಬರಿ 10 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರಯ 8 ಗಣಿ ಗುತ್ತಿಗೆ ನವೀಕರಣ ಮಾಡಿದ್ದರು. ಹರಾಜು ಹಾಕುವ ಬದಲಿಗೆ ನವೀಕರಣ ಮಾಡಿದ್ದರು. ಗಣಿ ಹಗರಣದಲ್ಲಿ ತನಿಖೆ…
ಬೆಂಗಳೂರು:- ಎಲ್ಲಾ ಫ್ರೀ, ಫ್ರೀ, ಫ್ರೀ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ತನ್ನ ಕ್ಯಾತೆ ಬದಲಿಸಿದೆ. ತನ್ನ ಗ್ಯಾರಂಟಿ ಹೊರೆ ಕಡಿಮೆ ಮಾಡಲು ಜನರಿಗೆ ಬರೆ ಕೊಡುತ್ತಿದೆ. ಅಯ್ಯೋ ದೇವ, ಹೀಗಾದ್ರೆ ಜೀವನ ಹೇಗಪ್ಪಾ? ಎಂಬ ಮಟ್ಟಿಗೆ ಕರುನಾಡಿನ ಜನರ ಸ್ಥಿತಿ ಆಗಿದೆ. https://ainkannada.com/power-line-cut-due-to-heavy-rain-complaint-filed-against-hescom-for-negligence/ ಹಾಲು, ಮೊಸರು, ತುಪ್ಪ, ಬಸ್, ಕರೆಂಟ್, ಮೆಟ್ರೋ, ಎಲ್ಲವೂ ಆಯ್ತು ಈಗ ನೀರಿನ ಸರದಿ. ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದು, ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ, ಒಟ್ಟಾರೆಯಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಕೆಗೆ ಎಷ್ಟು ದರ ಏರಿಕೆಯಾಲಿದೆ ಎಂಬ ಬಗ್ಗೆ ರಾಮ್ ಪ್ರಸಾತ್ ಮನೋಹರ್ ವಿವರಗಳನ್ನು ನೀಡಿದ್ದಾರೆ. ನೀರಿನ ದರ ಏರಿಕೆ:-…
ಚಾಮರಾಜನಗರ : ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ಮಲೆಯಾಳಿ ಸಿನಿಮಾ ಶೂಟಿಂಗ್ ನಡೆಸಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘಟನೆ ಇಂದು ಮಾಡ್ರಳ್ಳಿ ಮಹದೇವಪ್ಪ ನೇತೃತ್ವದಲ್ಲಿಂದು ಪ್ರತಿಭಟನೆಯನ್ನು ನಡಸಲಾಯಿತು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು. ಬಂಡೀಪುರ ಹುಲಿಯೋಜನೆಯ ಒಳಗಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ತೆರಳಲು ಅರಣ್ಯ ಇಲಾಖೆ ಅನೇಕ ನೀತಿ ನಿಯಮಗಳನ್ನು ರೂಪಿಸಿದೆ. ವನ್ಯಜೀವಿಗಳ ಸಂರಕ್ಚಣೆಗಾಗಿ ಕಟ್ಟುನಿಟ್ಟಿನ ಕಾಯಿದೆಯನ್ನು ಜಾರಿಗೆ ತಂದಿದೆ ಹಾಗಾಗಿ ಸ್ಥಳೀಯರೂ ಸೇರಿದಂತೆ ಖಾಸಗೀ ವಾಹನಗಳಿಗೆ ಅವಕಾಶವಿಲ್ಲ. ಅಂತಹದರಲ್ಲಿ ಆದರೆ ಮಲೆಯಾಳಿ ಸಿನಿಮಾದ ಶೂಟಿಂಗ್ ಗಾಗಿ ಅರಣ್ಯ ಇಲಾಖೆ ಅರಣ್ಯ ಕಾಯಿದೆಯನ್ನು ಉಲ್ಲಂಘನೆ ಮಾಡಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತು ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. https://ainkannada.com/violation-of-rules-in-bandipur-tiger-reserve-did-the-forest-minister-give-permission/ ಖಾಸಗಿ ವ್ಯಕ್ತಿಗಳಿಗೆ ಶೂಟಿಂಗ್ ನಡೆಸಲು ಅನುಮತಿಯನ್ನು ಸರ್ಕಾರವೇ ನೀಡಿದೆ ಎಂದು ಆದೇಶದ ಪ್ರತಿ ಸೃಷ್ಟಿಸಿದ್ದಾರೆ. ಅರಣ್ಯ ಇಲಾಖೆಗೆ ಶೂಟಿಂಗ್ ನಡೆಸಿರುವವರು 1 ಲಕ್ಚ…
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ, ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿ, ಮಳೆಗೆ ಹೊಲದಲ್ಲಿದ್ದ ವಿದ್ಯುತ್ ವೈರ್ ಕಟ್ ಆಗಿ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸಿದ್ದಪ್ಪ ಜುಲಪಿ ಎಂಬುವರ ಹೊಲದಲ್ಲಿ ವಿದ್ಯುತ್ ತಂತಿ ಮುರಿದುಬಿದ್ದಿದೆ. ಕಟ್ ಆಗಿ ಬಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಆತಂಕ ಮೂಡಿಸಿದೆ. https://ainkannada.com/a-storm-caused-a-power-line-to-fall-two-people-were-injured-electronic-equipment-caught-fire/ ವೈರ್ ಕಟ್ ಆಗಿ ಬಿದ್ದರೂ ಸಹ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಈ ಕುರಿತಂತೆ ಹೆಸ್ಕಾಂ ಸಿಬ್ಬಂದಿಗಳಿಗೆ ಫೋನ್ ಮಾಡಿ ಹೇಳಿದರೂ ಯಾರು ಕೇರ್ ಮಾಡುತ್ತಿಲ್ಲ. ವಿದ್ಯುತ್ ತಂತಿ ಕಟ್ ಆಗಿರೋ ಜಮೀನಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಭಯದಲ್ಲೇ ಕೆಲಸ ಮಾಡುವಂತಾಗಿದೆ.
ಬೆಂಗಳೂರು:- ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ 18 ಬಿಜೆಪಿ ಶಾಸಕರನ್ನು 6 ತಿಂಗಳು ಅಮಾನತು ಮಾಡಲಾಗಿತ್ತು. https://ainkannada.com/you-should-leave-the-country-us-warning-to-foreign-terrorists/ ಇದೀಗ ವಿಧಾನ ಸಭೆಯಿಂದ ಅಮಾನತ್ತುಗೊಂಡ ಶಾಸಕರು ಇಂದು ಪ್ರತ್ಯೇಕ ಸಭೆ ನಡೆಸಿದ್ದಾರೆ. ವಿಧಾನಸಭೆ ಕಾರ್ಯ ಕಲಾಪಕ್ಕೆ ಅಡ್ಡಿ, ಅಶಿಸ್ತು ಹಿನ್ನಲೆ ಅಮಾನತ್ತಾಗಿದ್ದ ಬಿಜೆಪಿಯ 18 ಶಾಸಕರು ಖಾಸಗಿ ಹೋಟೆಲ್ ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ ವಿಪಕ್ಷ ಬಿಜೆಪಿಯ ಮುಖ್ಯ ಸಚೇತನ ದೊಡ್ಡನಗೌಡ ಪಾಟೀಲ್ ಕರೆದ ಸಭೆಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ್ ನೇತೃತ್ವ ವಹಿಸಿದ್ದರು. ಅಮಾನತ್ತು ಆದೇಶ ಮರು ಪರಿಶೀಲಿಸುವಂತೆ ಸ್ಪೀಕರ್ ಗೆ ಮನವಿ ಮಾಡುವುದು ಸೇರಿದಂತೆ.. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ರಮಗಳು, ಜನರ ಅಹವಾಲು ಆಲಿಸಲು, ಅಧಿಕಾರಿಗಳ ಸಭೆ ನಡೆಸುವುದರ ಬಗ್ಗೆ ಸ್ಪೀಕರ್ ಗೆ ಮನವಿ ಸಲ್ಲಿಸುವುದರ ಬಗ್ಗೆ ಚರ್ಚೆ ನಡೆದಿದೆ. ಅಮಾನತುಗೊಂಡ 18 ಶಾಸಕರು:- ದೊಡ್ಡನಗೌಡ ಹೆಚ್.ಪಾಟೀಲ್, ಡಾ.ಅಶ್ವಥ್ ನಾರಾಯಣ್ ಸಿ.ಎನ್. ಎಸ್.ಅರ್.ವಿಶ್ವನಾಥ್, ಬಿ.ಎ.ಬಸವರಾಜ, ಎಂ.ಅರ್.ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಉಮಾನಾಥ್ ಕೋಟ್ಯಾನ್,…