Close Menu
Ain Live News
    Facebook X (Twitter) Instagram YouTube
    Tuesday, June 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ರಾಕಿಭಾಯ್‌ ಜೊತೆ ಮತ್ತೆ ನಟಿಸಲು ನೋ ಎಂದ ಕೆಜಿಎಫ್ ರೀನಾ..ಸೀತೆ ಪಾತ್ರ ಕೈಬಿಟ್ಟಿದ್ದೇಕೆ ಶ್ರೀನಿಧಿ ಶೆಟ್ಟಿ?

    By Author AINApril 25, 2025
    Share
    Facebook Twitter LinkedIn Pinterest Email
    Demo

    ಕೆಜಿಎಫ್‌ ಸರಣಿ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಗೆ ಜೋಡಿಯಾಗಿ ಮಿಂಚಿದ್ದವರು ಶ್ರೀನಿಧಿ ಶೆಟ್ಟಿ. ಆ ಬಳಿಕ ಅವರು ಕನ್ನಡದ ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ರಾಕಿಭಾಯ್‌ ಮನದರಸಿ ರೀನಾ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಅಮೋಘವಾಗಿ ನಟಿಸಿದ್ದರು. ಇವರಿಬ್ಬರ ಕಾಂಬೋ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಈ ಜೋಡಿಯನ್ನು ಮತ್ತೊಮ್ಮೆ ನೋಡಲು ಕಾಯುತ್ತಿದ್ದವರಿಗೆ ಶ್ರೀನಿಧಿ ಶೆಟ್ಟಿ ಇಂಟ್ರೆಸ್ಟಿಂಗ್‌ ವಿಚಾರವೊಂದನ್ನು ರಿವೀಲ್‌ ಮಾಡಿದ್ದಾರೆ.

    ಹಿಟ್‌ 3 ಸಿನಿಮಾ ಪ್ರಚಾರದ ವೇಳೆ ಶ್ರೀನಿಧಿ ತಮಗೆ ರಾಮಾಯಣ ಸಿನಿಮಾದಿಂದ ಆಫರ್‌ ಬಂದಿರುವುದಾಗಿ ಹೇಳಿದ್ದಾರೆ. ರಾಮಾಯಣ ಚಿತ್ರಕ್ಕೆ ಸ್ಕ್ರೀನ್ ಟೆಸ್ಟ್ ನೀಡಿ ಬಂದಿದ್ದರಂತೆ. ಈ ಬಗ್ಗೆ ಮಾತನಾಡಿರುವ ಅವರು, “ಹೌದು, ನಾನು ಸ್ಕ್ರೀನ್ ಟೆಸ್ಟ್ ನೀಡಿದ್ದೇನೆ. ಮೂರು ದೃಶ್ಯಗಳನ್ನು ಮಾಡಿ ತೋರಿಸಿದ್ದೆ. ಆ ವೇಳೆ, ಯಶ್ ಕೂಡ ಈ ಸಿನಿಮಾದ ಭಾಗವಾಗ್ತಾರೆ ಎಂದು ಕೇಳಿಪಟ್ಟಿದ್ದೆ, ಅದೇ ಸಮಯದಲ್ಲೇ ‘ಕೆಜಿಎಫ್ 2’ ರಿಲೀಸ್ ಆಗಿತ್ತು. ನನ್ನ ಮತ್ತು ಯಶ್ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಎರಡೂ ತಿಂಗಳಲ್ಲಿ, ರಾಮಾಯಣ ಆಡಿಷನ್ ಆಗಿತ್ತು. ಆಗ ನಾನು ಯಶ್‌ ಅವರು ರಾವಣನ ಪಾತ್ರ ನಿರ್ವಹಿಸುತ್ತಾರೆ ಎಂದು ಅಂದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಆಗ ನಾನು ಯೋಚಿಸಿದ್ದು ಇಷ್ಟೇ ಯಶ್ ರಾವಣನಾಗಿ, ನಾನು ಸೀತೆಯಾಗಿ ನಟಿಸಿದ್ರೆ ಅಭಿಮಾನಿಗಳು ಒಪ್ಪಿಕೊಳ್ತಾರೆ ಎಂದೆನಿಸಲಿಲ್ಲ. ಅಷ್ಟು ನಮ್ಮ ಜೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಹಾಗಾಗಿ ಈ ಸಿನಿಮಾವನ್ನು ಬಿಟ್ಟೆ ಎಂದು ಶ್ರೀನಿಧಿ ಶೆಟ್ಟಿ ಇಂಟ್ರೆಸ್ಟಿಂಗ್‌ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

    ನಿತಿಶ್‌ ತಿವಾರಿ ನಿರ್ದೇಶದನಲ್ಲಿ ಮೂಡಿ ಬರುತ್ತಿರುವ ರಾಮಾಯಣ ಸಿನಿಮಾದಲ್ಲಿ ರಾಮನಾಗಿ ರಣ್ಬೀರ್‌ ಕಪೂರ್‌, ಸೀತೆಯಾಗಿ ಸಾಯಿಪಲ್ಲವಿ ಅಭಿನಯಿಸುತ್ತಿದ್ದಾರೆ. ಯಶ್‌ ರಾವಣನಾಗಿ ಗಹಗಹಿಸಲಿದ್ದಾರೆ. ಎರಡು ಭಾಗದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಮುಂದಿನ ವರ್ಷದ ದೀಪಾವಳಿ ಮೊದಲ ಭಾಗ ತೆರೆಗೆ ಬರಲಿದೆ.

    Demo
    Share. Facebook Twitter LinkedIn Email WhatsApp

    Related Posts

    Dhanush: ವಾಯುಪಡೆ ಅಧಿಕಾರಿಯಾಗಿ ನಟ ಧನುಷ್: ವೈರಲ್ ಆಯ್ತು ಹೊಸ ಸಿನಿಮಾ ಲುಕ್

    June 9, 2025

    ಸಿನಿಮಾ ರೂಪದಲ್ಲಿ ಬರಲಿದೆ ʼವೃಕ್ಷಮಾತೆʼ ಜೀವನಗಾಥೆ..ಸಾಲುಮರದ ತಿಮ್ಮಕ್ಕನ ಪಾತ್ರದಲ್ಲಿ ಯಾರು?

    June 9, 2025

    ಕನ್ನಡ ವಿರೋಧಿ ಕಮಲ್ ಹಾಸನ್’ಗೆ ಮತ್ತೆ ಮುಖಭಂಗ: ಸುಪ್ರೀಂ ಕೋರ್ಟ್’ನಲ್ಲೂ ಹಿನ್ನಡೆ

    June 9, 2025

    ಅಮೆರಿಕಾದಲ್ಲಿ ಶಿವಣ್ಣನ ಜೀವನಚರಿತ್ರೆ ಪುಸ್ತಕ ಬಿಡುಗಡೆ..ಹಾಡು ಹೇಳಿ‌ ಶಿವಪಡೆ ರಂಜಿಸಿದ ಭಜರಂಗಿ..Video ವೈರಲ್!‌

    June 9, 2025

    ನನ್ನ ಮಗ ಇಲ್ಲದೇ ಜೀವನ ಕಷ್ಟವಾಗಿದೆ, ಸೊಸೆಗೆ ಸರ್ಕಾರಿ ಕೆಲಸ ಕೊಡಿ: ಸರ್ಕಾರಕ್ಕೆ ರೇಣುಕಾಸ್ವಾಮಿ ತಾಯಿ ಮನವಿ!

    June 8, 2025

    ರಾಜಮೌಳಿ ಸಿನಿಮಾಕ್ಕೆ ನೋ ಎಂದಿದ್ರಂತೆ ಬಾಲಿವುಡ್ ನಟ.. ಯಾರವರು?

    June 8, 2025

    ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನ ಮುಗಿಸಿದ್ರು: ನಟ ಮಡೆನೂರು ಮನು

    June 7, 2025

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ಅಧಿಕಾರಿಗಳ ತಲೆದಂಡ ಕುರಿತು ನಟಿ ರಮ್ಯಾ ಹೇಳಿದ್ದೇನು..?

    June 7, 2025

    ಅಟ್ಲಿ-ಅಲ್ಲು ಅರ್ಜುನ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ: 700 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಲಿದೆ ಮೆಗಾ ಮೂವಿ!

    June 7, 2025

    Lal Salaam: OTT ಗೆ ಲಗ್ಗೆ ಇಟ್ಟ ರಜನಿಕಾಂತ್ ಅಭಿನಯದ ‘ಲಾಲ್ ಸಲಾಂ’ ಸಿನಿಮಾ..!

    June 6, 2025

    ರಸ್ತೆ ಅಪಘಾತದಲ್ಲಿ ತಂದೆ ಸಾವು: ಮಲಯಾಳಂ ಖ್ಯಾತ ನಟ ಟಾಮ್ ಚಾಕೊ ಆಸ್ಪತ್ರೆಯಲ್ಲಿ!

    June 6, 2025

    ಚಿನ್ನಸ್ವಾಮಿ ಘಟನೆಯನ್ನು ಕಣ್ಣಾರೆ ಕಂಡಿದ್ದೇನೆ: ಚಂದನ್ ಶೆಟ್ಟಿ!

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.