ಬೆಂಗಳೂರು:- ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ವಾಹನಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜಯಚಂದ್ರನ್ ಹಾಗೂ ಮಣಿಕಂದನ್ ಬಂಧಿತರು. ಇವರು ತಮಿಳುನಾಡಿನ ವೇಲಂತೂರ್, ತಿರುವಣ್ಣಾಮಲೈ ಮೂಲದವರು ಎನ್ನಲಾಗಿದೆ.
ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ
ಆರೋಪಿಗಳು, ವಾಹನ ಕಳವು ಮಾಡಲಿಕ್ಕೆ ನಗರದಲ್ಲಿ ಬಾಡಿಗೆ ಮನೆ ಮಾಡ್ಕೊಂಡಿದ್ದರು. ಮನೆಮುಂದೆ ನಿಲ್ಲಿಸಿದ್ದ ಬೈಕ್ ಲಾಕ್ ಮುರಿದು ವಾಹನ ಕಳವು ಮಾಡುತ್ತಿದ್ದರು. ಅಲ್ಲದೆ ಇವರು ರಾತ್ರಿ ಮಾತ್ರ ಕಳ್ಳತನ ಮಾಡುತ್ತಿದ್ದರು. ಇದರ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಪೊಲೀಸರ ತನಿಖೆಯಲ್ಲಿ ಬ್ಯಾಟರಾಯನಪುರ, ಕೆಂಗೇರಿ, ಕಲಾಸಿಪಾಳ್ಯ, ಬೇಗೂರು, ಬಿಡದಿ, ಸಾತನೂರು, ಶ್ರೀರಂಗಪಟ್ಟಣ ಠಾಣೆ ವ್ಯಾಪ್ತಿಯ 18 ವಾಹನ ಕಳವು ಪ್ರಕರಣ ಪತ್ತೆಯಾಗಿದೆ. ಬಂಧಿತರಿಂದ 16 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರ್.ಆರ್.ನಗರ ಠಾಣೆ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.