Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ನೀವೇನು ಕಿಸಿಯುತ್ತೀರ ಅಂತ ಹೇಳ ಬೇಕೆ ಹೊರತು, ಇನ್ನೊಬ್ಬರು ಏನು ಕಿಸಿದರು ಅನ್ನೋದು ಬೇಕಾಗಿಲ್ಲ: ಕುಮಾರ್ ಬಂಗಾರಪ್ಪ ವಿರುದ್ಧ ಗುಡುಗಿದ ಶಿವಣ್ಣ

    By Author AINMay 4, 2024
    Share
    Facebook Twitter LinkedIn Pinterest Email
    Demo

    2024ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಸ್ಪರ್ಧಿಸಿದ್ದಾರೆ. ಪತ್ನಿ ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ಕುಮಾರ್ ಬಂಗಾರಪ್ಪ ವಿರುದ್ಧ ಶಿವರಾಜ್ ಮಾಸ್ ಡೈಲಾಗ್ ಹೊಡೆದಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ಗೀತಾ ಶಿವರಾಜ್‌ಕುಮಾರ್, ಶಿವಣ್ಣ ಹಾಗೂ ಮಧು ಬಂಗಾರಪ್ಪ ವಿರುದ್ಧ ಕುಮಾರ್ ಬಂಗಾರಪ್ಪ ಕಟು ಟೀಕೆಗಳನ್ನು ಮಾಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಗೀತಾ ಶಿವರಾಜ್‌ಕುಮಾರ್ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ ಎಂದು ಟೀಕಿಸಿದ್ದರು. ಅದಕ್ಕೆ ಶಿವಣ್ಣ ತಿರುಗೇಟು ನೀಡಿದ್ದಾರೆ.

    ಗೀತಾ ಶಿವರಾಜ್‌ಕುಮಾರ್ ಪರ ಪ್ರಚಾರ ಮಾಡುವ ವೇಳೆ ಕುಮಾರ್ ಬಂಗಾರಪ್ಪ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಹಾಗೂ ದುನಿಯಾ ವಿಜಯ್ ಜೊತೆಯಲ್ಲಿದ್ದರು. ಈ ವೇಳೆ “ನೀವೇನು ಕಿಸಿಯುತ್ತೀರ ಅಂತ ಹೇಳ ಬೇಕೆ ಹೊರತು, ಇನ್ನೊಬ್ಬರು ಏನು ಕಿಸಿದರು ಅನ್ನೋದು ಬೇಕಾಗಿಲ್ಲ.” ಎಂದಿದ್ದಾರೆ.

    “ಕೆಲಸ ಮಾಡಬೇಕಾದರೆ ಒಳ್ಳೆಯ ಮನಸ್ಸು ಬೇಕು. ಎಲ್ಲಿ ಬೇಕಾದರೂ ಆಕ್ಟ್ ಮಾಡಬಹುದು. ಮಾಡಬೇಕಾದ ಕಡೆ ಮಾಡಿಲ್ಲ. ಇಲ್ಲಿ ಬಂದು ಏನು ಮಾಡಬೇಕಾಗಿಲ್ಲ. ಮಾಡಬೇಕಾದಾಗ ಮಾಡಿದ್ದರೆ ಸೂಪರ್‌ಸ್ಟಾರ್ ಆಗುತ್ತಿದ್ದರು. ರಾಜ್‌ಕುಮಾರ್ ಫ್ಯಾಮಿಲಿಯಿಂದ ಯಾಕೆ ಇಷ್ಟು ಇಷ್ಟ ಪಡುತ್ತಾರೆ ಹೇಳಿ. ನಾನೇ ಇರಬಹುದು. ರಾಘುನೇ ಇರಬಹುದು, ಅಪ್ಪುನೇ ಇರಬಹುದು ಯಾಕೆ ಇಷ್ಟ ಪಡುತ್ತಾರೆ. ಮಾತಾಡಬೇಕಾದರೆ ಯೋಚನೆ ಮಾಡಬೇಕು. ಸುಮ್ಮನೆ ಮಾತಾಡೋದಲ್ಲ. ” ಎಂದು ಶಿವಣ್ಣ ಆಕ್ರೋಶ ಹೊರ ಹಾಕಿದ್ದಾರೆ.

    ಇದೇ ವೇಳೆ ಕುಮಾರ್ ಬಂಗಾರಪ್ಪ ಮಾತುಗಳಿಂದ ತನಗೆ ತುಂಬಾ ನೋವಾಗಿದ್ದು, ಅದಕ್ಕೆ ಹೀಗೆ ಮಾತಾಡುತ್ತಿದ್ದೇನೆ ಎಂದಿದ್ದಾರೆ. “ನೀವು ನಿಲ್ಲಬೇಕಾದರೆ, ನೀವೇನು ಕಿಸಿಯುತ್ತೀರ ಅಂತ ಹೇಳ ಬೇಕೆ ಹೊರತು, ಇನ್ನೊಬ್ಬರು ಏನು ಕಿಸಿದರು ಅನ್ನೋದು ಬೇಕಾಗಿಲ್ಲ. ನಾನು ಮಾಮೂಲಿ ಮನುಷ್ಯನಾಗಿ ಮಾತಾಡುತ್ತಿದ್ದೇನೆ. ಶಿವರಾಜ್‌ಕುಮಾರ್ ಆಗಿ ಮಾತಾಡುತ್ತಿಲ್ಲ. ಇವತ್ತು ಯಾರ್‍ಯಾರು ಕೇಳಿಸಿಕೊಳ್ಳುತ್ತಾರೋ ಕೇಳಿಸಿಕೊಳ್ಳಲಿ. ಇವತ್ತು ಗೀತಾನ ಗಂಡನಾಗಿ ಮಾತಾಡುತ್ತಿದ್ದೇನೆ. ಅವರಿಗೆ ಮನೆಯಿಲ್ಲ. ಏನು ಮನೆ ಇದ್ದರೆ ಮಾತ್ರ ಕೆಲಸ ಮಾಡುವುದಕ್ಕೆ ಆಗುತ್ತಾ? ನಾವು ಮನೆ ಮಾಡಬೇಕಿರುವು ನಿಮ್ಮಂತಹವರ ಹೃದಯದಲ್ಲಿ. ಸುಮ್ಮನೆ ಮಾತಾಡುತ್ತಾರೆ. ನಾನು ಮಾತಾಡುತ್ತಿರಲಿಲ್ಲ ಇವತ್ತು ನೋವಾಯ್ತು ನನಗೆ. ತುಂಬಾ ನೋವಾಯ್ತು. ಯಾಕಂದ್ರೆ ನಾನು ಯಾವುದೇ ವಿಷಯಕ್ಕೂ ಹೋಗುವವನಲ್ಲ.” ಎಂದಿದ್ದಾರೆ.

    ಇನ್ನು ಶಿವಮೊಗ್ಗದಲ್ಲಿ ಮನೆಯೇ ಇಲ್ಲ ಎಂದು ಟೀಕೆ ಮಾಡಿದ್ದ ಕುಮಾರ್ ಬಂಗಾರಪ್ಪಗೆ ಶಿವಣ್ಣ ಖಡಕ್ ರಿಪ್ಲೈ ಕೊಟ್ಟಿದ್ದಾರೆ. “ಮನೆ ಇದೆ. ಗೀತಾಳ ತವರು ಮನೆಯೇ ಇದು ಅಂದ್ಮೇಲೆ ಮನೆ ಇಲ್ಲದೆ ಇರುತ್ತದೆಯೇ.. ಮಾತಾಡಬೇಕಾದರೆ, ಯೋಚನೆ ಮಾಡಿ ಮಾತಾಡಬೇಕು. ಏನೇನೋ ಮಾತಾಡಿದರೆ ಹೇಗೆ? ನಾವೇನಾದರೂ ಅವರ ಬಗ್ಗೆ ಮಾತಾಡಿದ್ವಾ? ಒಂದು ಮಾತು ಆಡಿದ್ವಾ? ನಮಗೆ ಅದು ಬೇಕಾಗಿಲ್ಲ.” ಎಂದಿದ್ದಾರೆ.

    ಅಲ್ಲದೆ ಪತ್ನಿ ಗೀತಾಗೆ ನಾನೇ ಗ್ಯಾರಂಟಿ ಎಂದಿದ್ದಾರೆ. “ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳು ಜನರಿಗೆ ತಲುಪಿದೆ. ಅದರ ಬಗ್ಗೆ ನಾವು ಮಾತಾಡಬೇಕು. ಈಗ ನಾನೊಂದು ಗ್ಯಾರಂಟಿ ಕೊಡುತ್ತೇನೆ. ಗೀತಾಗೆ ನಾನೇ ಗ್ಯಾರಂಟಿ. ವಿಶ್ವಾಸ ಇಡಿ ಎಂದಿದ್ದಾರೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಪತ್ನಿ ಕಿರುಕುಳಕ್ಕೆ ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಹೊರ ಬಂದೇ..ಪತ್ರ ಬರೆದು ಹೊಸ ಬಾಳ ಸಂಗತಿ ಪರಿಚಯಿಸಿದ ಖ್ಯಾತ ನಟ!

    May 15, 2025

    ಸಿನಿಮಾವಾಯ್ತು ʼಕರಿ ಮಣಿ ಮಾಲೀಕ ನೀನಲ್ಲʼ..ಹೀರೋ-ಹೀರೋಯಿನ್‌ ಯಾರು?

    May 15, 2025

    ಸೋನು ನಿಗಮ್ʼಗೆ ಬಿಗ್ ರಿಲೀಫ್: ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

    May 15, 2025

    ಜನಾರ್ದನ ರೆಡ್ಡಿ ಪುತ್ರ ಚೊಚ್ಚಲ ಸಿನಿಮಾ ಬಿಡುಗಡೆಗೆ ರೆಡಿ..ಕಿರೀಟಿ ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆ?

    May 15, 2025

    ಅಪ್ಪನಾಗುತ್ತಿರುವ ಗಾಯಕ ವಾಸುಕಿ ವೈಭವ್‌ಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟ ಅರುಣ್‌ ಸಾಗರ್‌ ದಂಪತಿ! Video ವೈರಲ್!‌

    May 15, 2025

    ಕುಟುಂಬ ಸಮೇತರಾಗಿ ಅತ್ತೆ ಮನೆಗೆ ವಿರಾಟ್‌ ಎಂಟ್ರಿ..ಕೊಹ್ಲಿ ಫ್ಯಾಮಿಲಿ Video ವೈರಲ್‌!

    May 15, 2025

    ಮಗಳು-ಅಳಿಯ ಕಳ್ಳ-ಕಳ್ಳಿ ಎಂದ ಅಪ್ಪ..ತಂದೆ ಆರೋಪಕ್ಕೆ ಕ್ವಾಟರ್‌ ಕಥೆ ಹೇಳಿದ ಚೈತ್ರಾ ಕುಂದಾಪುರ

    May 15, 2025

    ಅಂದು ʼಸೂಪರ್‌ʼ ಐ ಲೈಕ್‌ ಇಟ್ಟ ಎಂದಿದ್ದ ರಜನಿ..ಇಂದು ಉಪ್ಪಿ ಡೈರೆಕ್ಷನ್‌ಗೆ ರಜನಿ ಡೈರೆಕ್ಟರ್‌ ಅಭಿಮಾನಿ!

    May 15, 2025

    ಪ್ಯಾನ್‌ ಇಂಡಿಯಾ ಬಿಟ್ಟು ಪ್ಯಾನ್‌ ವರ್ಲ್ಡ್‌ಗೆ ಗುರಿ ಇಟ್ಟ ಕಬ್ಜ ಡೈರೆಕ್ಟರ್..ಹಾಲಿವುಡ್‌ ಚಿತ್ರಗಳಿಗೆ ಸೆಡ್ಡು ಹೊಡೆಯಲು R.ಚಂದ್ರು ಮಾಸ್ಟರ್‌ ಐಡಿಯಾ!

    May 15, 2025

    ಚೈತ್ರಾ ಕುಂದಾಪುರ ಕಳ್ಳಿ, ಅವಳ ಗಂಡ ಕೂಡ ಕಳ್ಳ..ತಂದೆಯ ಸ್ಫೋಟಕ video ವೈರಲ್!

    May 15, 2025

    ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್‌ ಶೆಟ್ಟಿ..ಹತ್ತಿರ ಇದ್ರೂ ಸಹಕಲಾವಿದ ಮಾಡಿಲ್ಲವೇಕೆ ಕಾಂತಾರ ಸ್ಟಾರ್!?

    May 14, 2025

    ಮೆಟ್ ಗಾಲಾದಲ್ಲಿ ಶಿವಣ್ಣ-ಕಿಚ್ಚ-ದಚ್ಚು ಲುಕ್‌ ಹೀಗೆ ಇರುತ್ತಾ..ನೀವು ನೋಡ್ಲೇಬೇಕಾದ ಕ್ಯೂಟೆಸ್ಟ್‌ video

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.